ಕೆಲ ಸಂಘಟನೆಗಳು ಶಿವಾಜಿ ಮಹಾರಾಜ್ ಮುಸ್ಲಿಂ ವಿರೋಧಿ ಎನ್ನುವ ವದಂತಿಗಳನ್ನು ಹರಡಿಸುತ್ತಿವೆ. ಆದರೆ, ವಾಸ್ತವ ಸಂಗತಿಯೆಂದರೆ, ಶಿವಾಜಿ ಮಹಾರಾಜ್, ಮುಸ್ಲಿಮರಿಗೆ ತಮ್ಮ ಸೇನೆಯಲ್ಲಿ ಮಹತ್ವದ ಸ್ಥಾನಗಳನ್ನು ನೀಡಿದ್ದರು. ಇಂತಹ ದ್ವೇಷ ಭಾವನೆಗಳನ್ನು ಹರಡಿಸುವುದು ಜಾತ್ಯಾತೀತವಾದಕ್ಕೆ ಮತ್ತು ದೇಶದ ಏಕತೆಗೆ ಧಕ್ಕೆ ತರಲಿದೆ ಎಂದರು.