52 ವರ್ಷ ವಯಸ್ಸಿನ ವಿವಾದಾತ್ಮಕ ಲೇಖಕಿ ಸುದೀರ್ಘಾವಧಿಗೆ ಭಾರತದಲ್ಲಿ ಉಳಿಯಲು ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದು, ಈ ಕುರಿತಂತೆ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ. ಸಿಂಗ್ ಈ ಕುರಿತು ಬೇಗನೆ ನಿರ್ಧಾರ ಕೈಗೊಳ್ಳುವುದಾಗಿ ಅವರಿಗೆ ಭರವಸೆ ನೀಡಿದ್ದರು.
ಪ್ರಸ್ತುತ ಅವರ ವೀಸಾದ ಪರಿಶೀಲನೆ ಕಾರ್ಯನಡೆಯುತ್ತಿದ್ದು, ಪರಿಶೀಲನೆ ಮುಗಿದ ಬಳಿಕ ಸಚಿವಾಲಯ ನಿರ್ಧರಿಸುತ್ತದೆ.ತಸ್ಲೀಮಾ ಬಾಂಗ್ಲಾದೇಶದಲ್ಲಿ ಹುಟ್ಟಿದರೂ ವಿವಾದಾತ್ಮಕ ಲೇಖನಗಳಿಂದ ದೇಶದಿಂದ ಗಡೀಪಾರು ಮಾಡಲಾಗಿತ್ತು. ಭಾರತ ಸರ್ಕಾರ 2004ರಿಂದ ಅವರಿಗೆ ರೆಸಿಡೆಂಟ್ ವೀಸಾ ನೀಡಿದೆ. ನಸ್ರೀನ್ ಅವರ ಲಜ್ಜಾ, ಅಮರ್ ಮೆಬೇಲಾ ಮುಂತಾದ ಪುಸ್ತಕಗಳನ್ನು ಬಾಂಗ್ಲಾದೇಶದಲ್ಲಿ ನಿಷೇಧಿಸಲಾಗಿದೆ.