ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಆಗಾಗ ಟೀಕೆಗಳನ್ನು ಮಾಡುತ್ತ, ಅವುಗಳ ಮೂಲಕವೇ ಸದಾ ಸುದ್ದಿಯಲ್ಲಿ ಕಾಣಿಸಿಕೊಳ್ಳುವ ಉತ್ತರ ಪ್ರದೇಶದ ಸಚಿವ ಆಜಂ ಖಾನ್ ಎಲ್ಲ ಪಕ್ಷದ ಶಾಸಕರಿಗೆ ಒಂದು ಪೊರಕೆ ಮತ್ತು ಪೆನ್ ಉಡುಗೊರೆಯಾಗಿ ಕೊಡುವುದರ ಮೂಲಕ ಆಶ್ಚರ್ಯಕ್ಕೀಡು ಮಾಡಿದ್ದಾರೆ.
ಪೆನ್ ಮತ್ತು ಪೊರಕೆಯ ಜತೆ ಒಂದು ಪತ್ರವನ್ನಿಟ್ಟುರುವ ಅವರು, ನಾನು ನಿಮಗೆ ಎರಡು ಉಡುಗೊರೆಗಳನ್ನು ನೀಡುತ್ತಿದ್ದೇನೆ. ಇದರಲ್ಲಿ ಯಾವುದು ಸಮಾಜದಲ್ಲಿರುವ ಹೊಲಸನ್ನು ನಿರ್ಮೂಲನೆ ಮಾಡಬಲ್ಲದು ಮತ್ತು ಕೇವಲ ಘೋಷಣೆಗಳಿಂದ ಸಮಾಜವನ್ನು ಬದಲಿಸಲಾಗದು ಎಂಬುದನ್ನು ಇವುಗಳಲ್ಲಿ ಯಾವುದು ಸಂಕೇತಿಸುತ್ತದೆ ಎಂಬುದನ್ನು ನೀವೆಲ್ಲರೂ ನಿರ್ಧರಿಸಬೇಕು ಎಂದು ಅದರಲ್ಲಿ ಬರೆದಿದ್ದಾರೆ.