ಬಾಬಾ ರಾಮ್ ದೇವ್ ಪ್ರಜ್ಞೆ ತಪ್ಪಿದ್ದು ನಿಜವೇ?

ಭಾನುವಾರ, 18 ಡಿಸೆಂಬರ್ 2016 (16:46 IST)
ನವದೆಹಲಿ: ಈ ಸುದ್ದಿ ಎಷ್ಟು ನಿಜ ಎಷ್ಟು ಸುಳ್ಳು ಗೊತ್ತಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದಂತೂ ಸತ್ಯ. ಎಟಿಎಂ ಎದುರು ಹಣಕ್ಕಾಗಿ ಸಾಮಾನ್ಯ ಜನ ಸರತಿ ಸಾಲಿನಲ್ಲಿ ನಿಂತು ಅನಾಹುತವಾಗಿರುವ ಸುದ್ದಿ ಕೇಳಿದ್ದೇವೆ. ಬಾಬಾ ರಾಮ್ ದೇವ್ ಕೂಡಾ ಸಮಸ್ಯೆಗೆ ತಲುಪಿದ್ದಾರಂತೆ.

ಸುಡು ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಂತ ರಾಮ್ ದೇವ್ ಪ್ರಜ್ಷೆ ತಪ್ಪಿ ಬಿದ್ದಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂಬ ಸುದ್ದಿ ಫೋಟೋ ಸಮೇತ ಹರಿದಾಡುತ್ತಿದೆ. ಇದು ಎಷ್ಟು ನಿಜ ಎಷ್ಟು ಸುಳ್ಳು ಗೊತ್ತಿಲ್ಲ. ಆದರೆ ಪ್ರಧಾನಿಯವರ ನೋಟು ನಿಷೇಧ ಕ್ರಮವನ್ನು ಯೋಗ ಗುರು ಬೆಂಬಲಿಸಿದ್ದರು. ಆದರೆ ಹಣಕ್ಕಾಗಿ ಎಟಿಎಂ ಮುಂದೆ ನಿಂತಿದ್ದರೇ ಎನ್ನುವುದು ಖಚಿತಪಟ್ಟಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ