ಪೊಲೀಸರು ಸತ್ಲೋಕ್ ಆಶ್ರಮದ ರಾಮ್ಪಾಲ್ ಕೋಣೆಗೆ ಮುತ್ತಿಗೆ ಹಾಕಿ 10 ವಾಹನಗಳ ಬೆಂಗಾವಲಿನೊಂದಿಗೆ ಆಂಬ್ಯುಲೆನ್ಸ್ನಲ್ಲಿ ಒಯ್ದರು. ಆದರೆ ರಾಮ್ಪಾಲ್ ಅವರ ಸಶಸ್ತ್ರ ಬೆಂಬಲಿಗರು ಬಂಧನವನ್ನು ತಪ್ಪಿಸಲು ಪ್ರಯತ್ನಿಸಿ ಪೊಲೀಸರ ಮೇಲೆ ಆಸಿಡ್ ಪೋಚ್ಗಳನ್ನು ಎಸೆದರು. ಪಂಚಕುಲಾದಲ್ಲಿರುವ ಆಸ್ಪತ್ರೆಯೊಂದಕ್ಕೆ ಅವರನ್ನು ಸೇರಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ.
ಇಂದು ರಾಮ್ಪಾಲ್ ಅವರನ್ನು ಆಸ್ಪತ್ರೆಯಿಂದ ಕೋರ್ಟ್ಗೆ ಹಾಜರುಪಡಿಸಲಾಗುತ್ತದೆ. ರಾಮ್ಪಾಲ್ ತನ್ನ 5000 ಅನುಯಾಯಿಗಳೊಂದಿಗೆ ಆಶ್ರಮದಲ್ಲಿ ಅಡಗಿದ್ದು, ಮಹಿಳೆ ಮತ್ತು ಮಕ್ಕಳನ್ನು ರಕ್ಷಾಕವಚದಂತೆ ಬಳಸಿಕೊಂಡು ಬಂಧನವನ್ನು ತಪ್ಪಿಸಿಕೊಳ್ಳುತ್ತಿದ್ದರು.