ಮೂರು ಜನ ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಿ ಗೋಮಾಂಸ ತಿನ್ನಿಸಿದ್ದಾರೆಂದು ಆರೋಪಿಸಿ ಬಜರಂಗ ದಳದ ಕಾರ್ಯಕರ್ತರು ವ್ಯಕ್ತಿಯೊಬ್ಬನ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಬೀದಿ-ಬೀದಿಗಳಲ್ಲಿ ಮೆರವಣಿಗೆ ಮಾಡಿದ ಘಟನೆ ಉತ್ತರ ಪ್ರದೇಶದ ಓರಾದಲ್ಲಿ ನಡೆದಿದೆ.
ಶುಕ್ರವಾರ ಸುಮಾರು ಬಜರಂಗ ದಳದ ಕಾರ್ಯಕರ್ತರೆನ್ನಲಾದ 200 ಜನರ ಗುಂಪು ರಂದರ್ ಜಿಲ್ಲೆಯಲ್ಲಿರುವ ಅವದೇಶ್ ಮನೆಗೆ ನುಗ್ಗಿ ಅವರನ್ನು ಹೊರಗೆಳೆದು ತಂದರು. ಬಳಿಕ ಅವರ ತಲೆ, ಮೀಸೆ, ಹುಬ್ಬು ಬೋಳಿಸಿ, ಚಪ್ಪಲಿ ಹಾರ ಹಾಕಿ ನಗರದಾದ್ಯಂತ ಮೆರವಣಿಗೆ ಮಾಡಿಸಿದ್ದಾರೆ. 3 ಜನ ಹಿಂದೂಗಳನ್ನು ಪುಸಲಾಯಿಸಿ ಕಚ್ವಾ ಎಂಬ ಗ್ರಾಮದಲ್ಲಿರುವ ಚರ್ಚ್ ಒಂದರಲ್ಲಿ ಮತಾಂತರ ಮಾಡಿದ್ದಾರೆ ಎಂದು ಗುಂಪು ಆರೋಪಿಸಿದೆ. ಅಷ್ಟೆ ಅಲ್ಲದೇ ಮೂವರಿಗೆ ಒತ್ತಾಯಪೂರ್ವಕವಾಗಿ ಗೋಮಾಂಸ ತಿನ್ನಿಸಲಾಗಿದೆ ಎಂದು ಗುಂಪು ಕಿಡಿಕಾರಿದೆ.