ನಿರ್ಭಯಾ ಪ್ರಕರಣದ ಗ್ಯಾಂಗ್ರೇಪ್ ಕೈದಿ ಮುಕೇಶ್ ಸಿಂಗ್ನನ್ನು ಬಿಬಿಸಿ ಸಂದರ್ಶನ ಮಾಡಿರುವ ಬಗ್ಗೆ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಜೈಲಿನ ಮುಖ್ಯಾಧಿಕಾರಿಯಿಂದ ವಿಸ್ತೃತ ವರದಿಯನ್ನು ನೀಡುವಂತೆ ಕೋರಿದ್ದಾರೆ.
ಜೈಲಿನಲ್ಲಿರುವ ಕೈದಿಯನ್ನು ಸಂದರ್ಶನ ಮಾಡಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅವರು, ತಿಹಾರ್ ಜೈಲಿನ ನಿರ್ದೇಶಕ ಜನರಲ್ ಅಲೋಕ್ ಕುಮಾರ್ ವರ್ಮಾ ಅವರ ಜೊತೆ ಮಾತನಾಡಿ ಈ ಕುರಿತು ತುರ್ತಾಗಿ ವಿವರ ಕಳಿಸುವಂತೆ ಹೇಳಿದ್ದಾರೆ.ಬ್ರಿಟಿಷ್ ಚಿತ್ರತಯಾರಕ ಲೆಸ್ಲೀ ಉಡ್ವಿನ್ ಮತ್ತು ಬಿಬಿಸಿಗೆ ಮರಣದಂಡನೆ ಶಿಕ್ಷೆಗೆ ಗುರಿಯಾದ ಬಸ್ ಚಾಲಕ ಮುಕೇಶ್ ಸಿಂಗ್ ಸಂದರ್ಶನಕ್ಕೆ ಅನುಮತಿ ನೀಡಲಾಗಿತ್ತು.