ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿವಾದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಎನ್ಡಿಎ ಸರಕಾರ ಭಾರತೀಯ ಸಂವಿಧಾನದ ಹೊಸ ಭಾಷ್ಯೆ ಬರೆದಿದ್ದು ಅದರಡಿಯಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ವಿರೋಧಿಸುವುದು ಬಹು ದೊಡ್ಡ ಅಪರಾಧದಂತೆ ಎಂದು ಹೇಳಿದ್ದಾರೆ.
ಕೇಂದ್ರ ಸರಕಾರದ ಹೊಸ ಸಂವಿಧಾನದ ಪ್ರಕಾರ ಒಂದು ವೇಳೆ, ನೀವು ಬಿಜೆಪಿಯವರಾಗಿದ್ದರೆ ಹತ್ಯೆ, ರೇಪ್, ಹಲ್ಲೆ ಮಾಡುವುದು ಅಪರಾಧವಲ್ಲ. ಬಿಜೆಪಿ, ಆರೆಸ್ಸೆಸ್ ವಿರೋಧಿಸುವುದು ಇದೀಗ ಬಹುದೊಡ್ಡ ಅಪರಾಧ ಎಂದು ಟ್ವೀಟ್ ಮಾಡಿದ್ದಾರೆ.