ಬೆಳಗಾವಿಯಲ್ಲಿ ಬಹುಭಾಷಿಕರಾಗಿರುವ ಮರಾಠಿ ಭಾಷಿಕರ ಮೇಲೆ ಕರ್ನಾಟಕ ಸರಕಾರ ತೀವ್ರ ಅನ್ಯಾಯ ಮಾಡುತ್ತ ದೌರ್ಜನ್ಯ ಎಸಗುತ್ತಿದೆ. ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವದಂದು ಅದನ್ನು ವಿರೋಧಿಸಿ ಕರಾಳ ದಿನಾಚರಣೆ ನಡೆಸಿದ ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ ಮೇಯರ್, ಉಪಮೇಯರ್ ಅವರನ್ನು ಅಧಿಕಾರದಿಂದ ಕಿತ್ತು ಹಾಕಲು ಹುನ್ನಾರ ನಡೆಸಿದೆ. ಎಂಇಎಸ್ ಕಾರ್ಯಕರ್ತರ ಮೇಲೆ ಕರ್ನಾಟಕ ಸರಕಾರ ಅಮಾನುಷವಾಗಿ ನಡೆಸಿಕೊಂಡು ಕರಾಳ ದಿನಾಚರಣೆಯಲ್ಲಿ ಭಾಗಿಯಾದ ನೆಪ ಮಾಡಿಕೊಂಡು ಬಂಧಿಸುತ್ತಿದೆ ಎಂದು ದೂರಿದ್ದಾರೆ.
ಮರಾಠಿಗರ ರಕ್ಷಣೆಗಾಗಿ ಹಾಗೂ ಮಹಾರಾಷ್ಟ್ರ ಏಕೀಕರಣದ ವಿಷಯದಲ್ಲಿ ಶಿವಸೇನೆ ಸದಾ ಮುಂಚೂಣಿಯಲ್ಲಿ ಹೋರಾಟ ನಡೆಸುತ್ತಾ ಬಂದಿದೆ ಎಂದಿರುವ ಅವರು, ಕರ್ನಾಟಕ ಸರಕಾರ ಬೆಳಗಾವಿ ಭಾಗದಲ್ಲಿ ಕಾಲಕಾಲಕ್ಕೆ ಮರಾಠಿ ಭಾಷಿಕರ ಮೇಲೆ ತನ್ನ ಪೊಲೀಸ್ ಬಲ ಉಪಯೋಗಿಸಿಕೊಂಡು ಮನ ಬಂದಂತೆ ಥಳಿಸುತ್ತಿದೆ ಹಾಗೂ ಚಿತ್ರಹಿಂಸೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.