ನರೇಂದ್ರ ಮೋದಿ ಕೊಲೆಗಾರ ಎಂದು ಜರಿದ ಬೇನಿ ಪ್ರಸಾದ ವರ್ಮಾ

ಸೋಮವಾರ, 21 ಏಪ್ರಿಲ್ 2014 (14:52 IST)
ಬಿಜೆಪಿ ಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿಯ ಮೇಲೆ ತೀವೃವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ಬೇನಿ ಪ್ರಸಾದ್ ವರ್ಮಾ ನರೇಂದ್ರ ಮೋದಿ ತಮ್ಮ 18ನೇ ವಯಸ್ಸಿನಲ್ಲಿ ಕೊಲೆ ಮಾಡಿ ಮನೆ ಬಿಟ್ಟು ಓಡಿ ಹೋಗಿದ್ದರು ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ. 
ಲಖನೌನಲ್ಲಿ ಮಾತನಾಡುತ್ತಿದ್ದ ಕೇಂದ್ರ ಉಕ್ಕು ಸಚಿವ, ಮೋದಿ ತಮ್ಮ 18 ನೇ ವಯಸ್ಸಿನಲ್ಲಿ ಕೊಲೆಗೈದು  ಮನೆಯಿಂದ ಪರಾರಿಯಾಗಿದ್ದರು ಎಂದು ಆರೋಪಿಸಿದರು.
 
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್ ವರ್ಮಾರವರ ಹೇಳಿಕೆ ಕಾಂಗ್ರೆಸ್ ತನ್ನ ಪ್ರಚಾರ ಕಾರ್ಯಕ್ರಮದಲ್ಲಿ ಸಂಪೂರ್ಣ ಅಧೋಗತಿಗೆ ಜಾರಿದೆ. ಯಾರೊಬ್ಬರು ತಲುಪಬಹುದಾದ ಕನಿಷ್ಠ ಬಿಂದುವನ್ನು  ಅದು ತಲುಪಿದೆ ಎಂಬುದನ್ನು ತೋರಿಸುತ್ತದೆ ಎಂದು ದೂಷಿಸಿದ್ದಾರೆ.  
 
ವರ್ಮಾ "ಪ್ರತಿ ಚುನಾವಣೆಯಲ್ಲಿ ಇತಿಹಾಸವನ್ನು ತಿರುಚುವುದನ್ನು ಪುನರಾವರ್ತಿಸುವ ಅಪರಾಧಿ". 
 
 "ಅವರು ಆರೋಪಗಳು ತುಚ್ಛ ಮತ್ತು ಆಧಾರರಹಿತವಾಗಿವೆ ಮತ್ತು ಅವರ ಆರೋಪಗಳಿಗೆ   ಪುರಾವೆ ಇಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ " ಎಂದು ಅವರು ನಿರ್ಮಲಾ ಟೀಕಿಸಿದ್ದಾರೆ. 
 
ಅಲ್ಲದೇ "ಚುನಾವಣೆಗಳು ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ಸಿನ  'ಬೂಟಾಟಿಕೆ ಮತ್ತು ಹತಾಶೆ' ಹೆಚ್ಚಾಗುತ್ತಿದೆ". ತಾವು ಅಸ್ಥಿರ ನೆಲದ ಮೇಲೆ ನಿಂತಿದ್ದೇವೆ ಎಂದು ಅವರಿಗೆ ತಿಳಿದಿದೆ ಎಂದು ಅವರು ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ