ಬಿಹಾರ್ ಸಿಎಂ ಬಿಜೆಪಿ ಸಂಸದರಿಗೆ ಬಹಿರಂಗವಾಗಿ ಆದ್ಯತೆ ನೀಡುತ್ತಿರುವುದನ್ನು ರಾಜಕೀಯ ವೀಕ್ಷಕರು ಈ ಮೊದಲು ಗಮನಿಸಿದ್ದಾರೆ. ಜೆಡಿ (ಯು) ಶಾಸಕ ಕೃಷ್ಣನಂದನ್ ಯಾದವ್ ಸೇರಿದಂತೆ ತಮ್ಮ ಪಕ್ಷದ ಅನೇಕ ನಾಯಕರು ವೇದಿಕೆಯಲ್ಲಿದ್ದ ಸಭೆಯೊಂದರಲ್ಲಿ ,ಮೊದಲು ಮಾತನಾಡಲು ಅವರು ಬಿಜೆಪಿಯ ಗಯಾದ ಸಂಸದ ಹರಿ ಮಾಂಜ್ಹಿ ಮತ್ತು ಶಾಸಕರಾದ ಶ್ಯಾಮ್ ದೇವ್ ಪಾಸ್ವಾನ್ ಮತ್ತು ಪ್ರೇಮ್ ಕುಮಾರ್ ಅವರಿಗೆ ಅವಕಾಶ ನೀಡಿರುವುದು ಜೆಡಿಯು ಸಂಸದರ ಕೆಂಗೆಣ್ಣಿಗೆ ಗುರಿಯಾಗಿತ್ತು.
ಮಾಂಜ್ಹಿ ತಮ್ಮ ಮಾಜಿ ಗುರು ನಿತೀಶ್ ಕುಮಾರ್ ಮೇಲೆ ಬಹಳ ಹಿಂದಿನಿಂದಲೂ ಅಸಮಾಧಾನವನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಕೇವಲ ಒಂದು ಕಾರಣವಲ್ಲ, ಬಹಳ ಕಾರಣಗಳಿಂದಾಗಿ ಅವರು ನಿತೀಶ್ ವಿರುದ್ಧ ಕೋಪವನ್ನು ಹೊಂದಿದ್ದಾರೆ ಎಂಬುದು ರಾಜಕೀಯ ವೀಕ್ಷಕರ ಅಂಬೋಣ. 2005ರಲ್ಲಿ ಮಾಂಜ್ಹಿ ವಿರುದ್ಧ ವಿಜಿಲೆನ್ಸ್ ತನಿಖೆ ಪ್ರಾರಂಭವಾದಾಗ ಸಚಿವರಾಗಿ ಅವರು ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ರಾಜೀನಾಮೆ ನೀಡುವಂತೆ ನಿತೀಶ್ ಸೂಚಿಸಿದ್ದರು. ಅವರ ಅಂದಿನ ವರ್ತನೆ ಕೂಡ ಬಿಹಾರದ ಹಾಲಿ ಸಿಎಂ ಅವರನ್ನು ಕಾಡುತ್ತಿದೆ ಎನ್ನಲಾಗುತ್ತಿದೆ.