ಪ್ರಧಾನಿ ಮೋದಿ ಹಲವಾರು ಬಾರಿ ಬಿಹಾರ್ ಚುನಾವಣೆ ರ್ಯಾಲಿಗಳಲ್ಲಿ ಪಾಲ್ಗೊಂಡಿದ್ದಲ್ಲದೇ ಅವರ ಸಚಿವ ಸಂಪುಟದ ಸದಸ್ಯರು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸುಮಾರು ಎಂಟು ತಿಂಗಳುಗಳಿಂದ ಪಾಟ್ನಾವನ್ನು ನೆಲೆಯಾಗಿಸಿಕೊಂಡು ವಿಶ್ವದ ಗಮನ ಸೆಳೆಯುವಂತೆ ಮಾಡಿದ್ದರು. ಆದರೆ, ಅವರಿಗೆ ಫಲಿತಾಂಶ ಬಂದಾಗ ನಿರಾಸೆ ಕಾದಿತ್ತು ಎಂದರು.
ಸಾವಿರಾರು ಆರೆಸ್ಸೆಸ್ ಕಾರ್ಯಕರ್ತರನ್ನು ಚುನಾವಣೆಗಾಗಿ ನೇಮಿಸಲಾಗಿತ್ತು, ಮೋದಿ ಸಚಿವ ಸಂಪುಟವೇ ನಿತೀಶ್ ಮತ್ತು ಲಾಲು ವಿರುದ್ಧ ಸಮರಕ್ಕೆ ಇಳಿದಿತ್ತು. ಆದರೆ, ಮತದಾರರು ನಿತೀಶ್- ಲಾಲು ಕಾಂಗ್ರೆಸ್ ಮೈತ್ರಿಕೂಟದ ಪರ ವಾಲಿದರು ಎಂದು ಕಾಂಗ್ರೆಸ್ ವಕ್ತಾರ ಜೋಷಿ ಹೇಳಿದ್ದಾರೆ.