ಬಿಹಾರ್: ಜೆಡಿಯು ನಾಲ್ವರು ರೆಬೆಲ್ ಶಾಸಕರು ಬಿಜೆಪಿಗೆ ಸೇರ್ಪಡೆ
ಬುಧವಾರ, 19 ಆಗಸ್ಟ್ 2015 (15:07 IST)
ಬಿಹಾರ್ ವಿಧಾನಸಭೆ ಚುನಾವಣೆ ಕಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಇದೀಗ ನಾಲ್ವರು ಜೆಡಿಯು ರೆಬೆಲ್ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಢಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದ ನಾಲ್ವರು ಶಾಸಕರನ್ನು ಜೆಡಿಯು ಹೈಕಮಾಂಡ್, ಪಕ್ಷ ವಿರೋಧಿ ಚಟುವಟಿಕೆ ಮೇಲೆ ಆರು ವರ್ಷಗಳ ಅವಧಿಗೆ ಅಮಾನತ್ತುಗೊಳಿಸಿತ್ತು.
ಗ್ಯಾನೇಂದ್ರ ಸಿಂಗ್ ಗಯಾನು, ರಾಜೇಶ್ವರ್ ರಾಜ್, ದಿನೇಶ್ ಖುಶ್ವಾ ಮತ್ತು ಸುರೇಶ್ ಚಂಚಲ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಜೆಡಿಯು ಶಾಸಕರಾಗಿದ್ದಾರೆ ಎಂದು ಬಿಜೆಪಿ ಮುಖಂಡ ಸಂಜಯ್ ಮಯಾಂಕ್ ತಿಳಿಸಿದ್ದಾರೆ.
ಕಳೆದ ವರ್ಷ ಜೆಡಿಯು ಪಕ್ಷದಿಂದ ಅಮಾನತ್ತುಗೊಳಿಸುವ ಮುನ್ನ ಗ್ಯಾನೇಂದ್ರ ಸಿಂಗ್ ಬಿಹಾರ್ ಮುಖ್ಯಮಂತ್ರಿಗೆ ತುಂಬಾ ಆಪ್ತರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಜೆಡಿಯು ಪಕ್ಷದಿಂದ ಮತ್ತಷ್ಟು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಬಿಜೆಪಿ ವಕ್ತಾರರು ತಿಳಿಸಿದ್ದಾರೆ.