ಚುನಾವಣೆ ಆಯೋಗ ಮತದಾನಕ್ಕೆ ದಿನಾಂಕ ಘೋಷಿಸುವ ಮುನ್ನವೇ ಪ್ರಧಾನಿ ಮೋದಿ ಮೂರು ಸಾರ್ವಜನಿಕ ಸಭೆಗಳನ್ನು ನಡೆಸಲು ನಿರ್ಧರಿಸಿದ್ದಾರೆ. ಬಿಜೆಪಿ ದುರ್ಬಲವಾಗಿರುವ ಕ್ಷೇತ್ರಗಳಲ್ಲಿ ಶಕ್ತಿಯನ್ನು ಹೆಚ್ಚಿಸುವುದು. ರಾಜ್ಯದ ಆಗ್ನೇಯ ಭಾಗದಲ್ಲಿ ಮುಸ್ಲಿಮರು ಮತ್ತು ಯಾದವರು ನಿರ್ಣಾಯಕ ಸಮುದಾಯಗಳಾಗಿರುವುದರಿಂದ ಅವರನ್ನು ಓಲೈಸಲು ಬಿಜೆಪಿ ನಿರ್ಧರಿಸಿದೆ. ಆದರೆ, ಮುಸ್ಲಿಂ ಮತ್ತು ಯಾದವ್ ಸಮುದಾಯ ಇಲ್ಲಿಯವರೆಗೆ ಲಾಲು ಯಾದವ್ಗೆ ಬೆಂಬಲ ನೀಡುತ್ತಾ ಬಂದಿರುವುದು ಬಿಜೆಪಿ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.