ಐಎಸ್ಐ ಸೇರುವಂತೆ ಪಾಕಿಸ್ತಾನದಿಂದ ಕರೆ ಬಂದ ಹಿನ್ನೆಲೆಯಲ್ಲಿ, ಕಾಲೇಜು ವಿದ್ಯಾರ್ಥಿಯಾದ ಮುಕೇಶ್ ಕುಮಾರ್ ಕೈಮೂರ್ ಜಿಲ್ಲೆಯ ಭಾಬುವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರ್ಪ್ರೀತ್ ಕೌರ್ ತಿಳಿಸಿದ್ದಾರೆ.
ಪಿಯುಸಿ ತರಗತಿಯಲ್ಲಿ ಓದುತ್ತಾ, ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿರುವ ಮುಕೇಶ್ ಮಾತನಾಡಿ, ಆರಂಭದಲ್ಲಿ ನಾನು ಆ ಕರೆಗೆ ಉತ್ತರಿಸಲಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಆದರೆ, ಎರಡನೇ ಬಾರಿ ಕರೆ ಬಂದಾಗ ನಾನು ಸ್ವೀಕರಿಸಿದೆ. ಒಂದು ವೇಳೆ, ಐಎಸ್ಐ ಸೇರಿದಲ್ಲಿ ಭಾರಿ ಮೊತ್ತದ ಹಣ ನೀಡುವುದಾಗಿ ಆಮಿಷವೊಡ್ಡಲಾಯಿತು. ಆದರೆ, ನಾನು ಅದನ್ನು ತಿರಸ್ಕರಿಸಿದೆ. ತದ ನಂತರ ನಾನು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ಕುಮಾರ್ ತಿಳಿಸಿದ್ದಾರೆ.