ಕೊಚ್ಚಿಯಲ್ಲಿ ವರದಿಗಾರರ ಜತೆ ಮಾತನಾಡುತ್ತಿದ್ದ ಶಾ, ನಮ್ಮ ಪಕ್ಷ ಒತ್ತಾಯಪೂರ್ವಕ ಧರ್ಮಪರಿವರ್ತನೆಯನ್ನು ಬೆಂಬಲಿಸುವುದಿಲ್ಲ . ಆದ್ದರಿಂದ ನಾವು ಈ ಕುರಿತು ಕಾನೂನು ತರಲು ಹೊರಟಿದ್ದೇವೆ. ತಮ್ಮದು ಜಾತ್ಯಾತೀತ ಪಕ್ಷ ಎಂದು ಸಾರುವ ರಾಜಕೀಯ ಪಕ್ಷಗಳು ತಮ್ಮ ನಿಲುವು ಪ್ರಾಮಾಣಿಕವಾದದ್ದು ಎಂದಾದರೆ ಬಿಲ್ ಪಾಸ್ ಮಾಡಲು ಸಹಕಾರ ನೀಡಬೇಕು ಎಂದರು.