ಗುಜರಾತ್ ಮಾದರಿಯ ಭೂಸ್ವಾಧೀನದ ಬಗ್ಗೆ ರಾಹುಲ್ ಪ್ರತಿಕ್ರಿಯೆಯನ್ನು ಟೀಕಿಸಿ, ರಾಬರ್ಟ್ ವಾದ್ರಾ ಅವರ ಅಭಿವೃದ್ಧಿ ಮತ್ತು ಭೂಸ್ವಾಧೀನವನ್ನು ಪ್ರಶ್ನಿಸಿದರು. ಕೈಗಾರಿಕೋದ್ಯಮಿಗಳಿಂದ ಸಾಲ ಪಡೆದು ನಾವು ಗೆದ್ದಿದ್ದೇವೆ ಎಂದು ರಾಹುಲ್ ಹೇಳುತ್ತಾರೆ. ರಾಷ್ಟ್ರದ ಜನಾದೇಶವನ್ನು ಅವರು ಈರೀತಿ ತಮಾಷೆ ಮಾಡಲು ಅವಕಾಶವಿದೆಯಾ? ರಾಹುಲ್ ಗಾಂಧಿ ದೇಶದ ಜನತೆಗೆ ಕ್ಷಮೆಯಾಚಿಸಬೇಕು ಎಂದು ರವಿಶಂಕರ್ ಪ್ರಸಾದ್ ಹೇಳಿದರು.
ರಾಹುಲ್ ಅವರು ಆತ್ಮಾವಲೋಕನಕ್ಕಾಗಿ ವಿದೇಶಕ್ಕೆ ನಿಗೂಢ ಕಣ್ಮರೆಯಾಗಿದ್ದನ್ನು ಟೀಕಿಸುತ್ತಾ, ಮೋದಿ ಮೂರು ರಾಷ್ಟ್ರಗಳ ಪ್ರವಾಸದಿಂದ ದೇಶಕ್ಕೆ ಗೌರವ ಮತ್ತು ದೊಡ್ಡ ಒಪ್ಪಂದಗಳನ್ನು ಮಾಡಿಕೊಂಡಿದ್ದು, ದಿಢೀರ್ ನಾಪತ್ತೆಯಾಗಲಿಲ್ಲ ಎಂದು ಛೇಡಿಸಿದರು.