ಬಿಹಾರ್ ಸೋಲಿಗೆ ಸಾಮೂಹಿಕ ಬಿಜೆಪಿ ನಾಯಕತ್ವ ಹೊಣೆ

ಗುರುವಾರ, 12 ನವೆಂಬರ್ 2015 (15:20 IST)
ಬಿಹಾರ್ ಸೋಲಿನ ಬಗ್ಗೆ ಪಕ್ಷದ ಹಿರಿಯ ನಾಯಕರು ವಾಗ್ದಾಳಿ ನಡೆಸುತ್ತಿರುವುದನ್ನು ತಡೆಯಲು ಯತ್ನಿಸುತ್ತಿರುವ ಬಿಜೆಪಿ ಹೈಕಮಾಂಡ್, ಪಕ್ಷದ ದಿಗ್ಗಜ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್‌.ಕೆ.ಆಡ್ವಾಣಿ ಪಕ್ಷದ ಸೋಲು ಗೆಲುವಿನಲ್ಲಿ ಸಾಮೂಹಿಕ ಹೊಣೆ ಹೊರುವಂತಹ ಮಾರ್ಗದರ್ಶನ ನೀಡಿದ್ದಾರೆ ಎಂದು ಹೇಳಿಕೆ ನೀಡಿದೆ.
 
ಆಡ್ವಾಣಿ, ಮುರಳಿ ಮನೋಹರ್ ಜೋಷಿ, ಯಶ್ವಂತ್ ಸಿನ್ಹಾ, ಶತ್ರುಘ್ನ ಸಿನ್ಹಾ, ಶಾಂತಾ ಕುಮಾರ್ ಬಿಹಾರ್ ಸೋಲಿಗೆ ಪ್ರಧಾನಿ ಮೋದಿ ಮತ್ತು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಾರಣರಾಗಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. 
 
ಬಿಜೆಪಿ ಪಕ್ಷದ ದಿಗ್ಗಜ ನಾಯಕರ ಮಾರ್ಗದರ್ಶನ ಮತ್ತು ಸಲಹೆಗಳನ್ನು ಸ್ವೀಕರಿಸುವುದಾಗಿ ಬಿಜೆಪಿ ಹೈಕಮಾಂಡ್ ಭಿನ್ನಮತಿಯ ನಾಯಕರನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದೆ.
 
ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ವೆಂಕಯ್ಯ ನಾಯ್ಡು ಮತ್ತು ನಿತಿನ್ ಗಡ್ಕರಿ, ಬಿಹಾರ್ ಸೋಲಿಗೆ ಪ್ರತಿಯೊಬ್ಬ ಬಿಜೆಪಿ ನಾಯಕರು ಹೊಣೆಯಾಗಿದ್ದಾರೆ ಎಂದು ಜಂಟಿ ಹೇಳಿಕೆಯನ್ನು ಹೊರಡಿಸಿದ್ದಾರೆ.
 
ಬಿಜೆಪಿ  ಹಿರಿಯ ನಾಯಕರಾದ ಅಟಲ್ ಬಿಹಾರ್ ವಾಜಪೇಯಿ, ಎಲ್‌.ಕೆ.ಆಡ್ವಾಣಿಯವರ ನಾಯಕತ್ವದಲ್ಲೂ ಬಿಜೆಪಿ ಸೋಲನುಭವಿಸಿತ್ತು ಎಂದು ಕೇಂದ್ರ ಸಚಿವ ಗಡ್ಕರಿ ಹೇಳಿಕೆ ನೀಡಿ ಆಡ್ವಾಣಿ ಬೆಂಬಲಿಗರಿಗೆ ಬಿಸಿ ಮುಟ್ಟಿಸಿದ್ದರು.

ವೆಬ್ದುನಿಯಾವನ್ನು ಓದಿ