ನಾಳೆ ಲೋಕಸಭೆ ಚುನಾವಣೆ ಮತಎಣಿಕೆ ಬಳಿಕ ಫಲಿತಾಂಶ ಹೊರಬೀಳಲಿದ್ದು, ಅಹಿತಕರ ಘಟನೆ ನಡೆಯುವ ಸಾಧ್ಯತೆಯಿರುವುದರಿಂದ ಬಿಗಿ ಭದ್ರತೆ ಒದಗಿಸಲು ಕೇಂದ್ರಸರ್ಕಾರ ನಿರ್ಧರಿಸಿದೆ. ಫಲಿತಾಂಶಕ್ಕಾಗಿ ಎಲ್ಲ ಪಕ್ಷಗಳೂ ಕಾತುರದಿಂದ ಕಾಯುತ್ತಿವೆ. ಫಲಿತಾಂಶಕ್ಕೂ ಮುನ್ನವೇ ಬಿಜೆಪಿ ಸರ್ಕಾರ ರಚನೆಗೆ ಸಜ್ಜಾಗುತ್ತಿದ್ದು, ಅಡ್ವಾಣಿ ಮತ್ತು ಸುಷ್ಮಾ ಸ್ವರಾಜ್ ಅವರಿಗೆ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ವಿಚಾರವಿನಿಮಯ ನಡೆಸಲಾಗುತ್ತಿದೆ.
ಈ ನಡುವೆ ಆರ್ಎಸ್ಎಸ್ ಮುಖಂಡರು ರಾಜನಾಥ್ ಸಿಂಗ್ ಮನೆಯಲ್ಲಿ ಸಭೆ ನಡೆಸಲಿದ್ದು, ಬಿಜೆಪಿಗೆ ಮಾರ್ಗದರ್ಶನ ಮಾಡಲಿದೆ. ಮೋಹನ್ ಭಾಗವತ್, ದತ್ತಾತ್ರೇಯ ಹೊಸಬಾಳೆ ಎಲ್ಲರೂ ದೆಹಲಿ ತಲುಪಿದ್ದು, ಅಡ್ವಾಣಿ ಭವಿಷ್ಯವನ್ನು ಕೂಡ ನಿರ್ಧರಿಸಲಿದೆ. ರಾಜನಾಥ್ ಸಿಂಗ್ ಅಧ್ಯಕ್ಷರಾಗಿ ಮುಂದುವರಿಯಬೇಕೇ ಅಥವಾ ಕ್ಯಾಬಿನೆಟ್ಗೆ ಸೇರುತ್ತಾರೆಯೇ ಎಂಬ ಬಗ್ಗೆ ಆರ್ಎಸ್ಎಸ್ ನಿರ್ಧರಿಸಲಿದೆ.