ನಿತೀಶ್ ಈಗ ಅಸಹಾಯಕ ಮುಖ್ಯಮಂತ್ರಿ, ಎನ್‌ಡಿಎದಲ್ಲಿದ್ದಾಗ ಸಿಂಹದಂತ್ತಿದ್ದರು: ಬಿಜೆಪಿ

ಬುಧವಾರ, 10 ಫೆಬ್ರವರಿ 2016 (17:01 IST)
ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎನ್‌ಡಿಎಯಲ್ಲಿದ್ದಾಗ ಸಿಂಹದತ್ತಿದ್ದರು, ಆದರೆ ಲಾಲು ನೇತೃತ್ವದ ಆರ್‌ಜೆಡಿ ಜತೆಗಿನ ಮೈತ್ರಿಯ ನಂತರ ಅಸಹಾಯಕ ಬೆಕ್ಕಿನಂತಾಗಿದ್ದಾರೆ ಎಂದು ನಿನ್ನೆ ಕೇಂದ್ರ ಸಚಿವ, ಲೋಕ ಜನಶಕ್ತಿ ಪಕ್ಷದ ನಾಯಕ ರಾಮವಿಲಾಸ್ ಹೇಳಿದ್ದನ್ನು  ಬಿಜೆಪಿ ಪುನರುಚ್ಚರಿಸಿದೆ. 
 
ಹೌದು, ಲಾಲು ಅವರ ಜತೆ ಸೇರಿದಾಗಿನಿಂದ ಅವರು ಅಸಹಾಯಕ ಸಿಎಂ ಆಗಿದ್ದಾರೆ ಎಂದು ಬಿಹಾರ್ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ವ್ಯಂಗ್ಯವಾಡಿದ್ದಾರೆ.
 
ಕೇಂದ್ರ ಸಚಿವ ಮತ್ತು ಎನ್‌ಡಿಎ ಮೈತ್ರಿಕೂಟದಲ್ಲಿರುವ ರಾಮವಿಲಾಸ್ ಪಾಸ್ವಾನ್ ನಿನ್ನೆ ನಿತೀಶ್ ಕುಮಾರ್ ಅವರ ಮೇಲೆ ವಾಗ್ದಾಳಿ ನಡೆಸುತ್ತ  ಅವರು ಬಿಜೆಪಿ ಜತೆಗಿದ್ದಾಗ ಸಿಂಹದತ್ತಿದ್ದರು. ಆದರೆ ಲಾಲು ಸಂಘ ಮಾಡಿ ಬೆಕ್ಕಾಗಿ ಬದಲಾಗಿದ್ದಾರೆ. ಪಾಪ, ಅಸಹಾಯಕ ಮುಖ್ಯಮಂತ್ರಿ ಎಂದಿದ್ದರು.
 
ಬಿಹಾರ್‌ದಲ್ಲಿ ಮಹಾಮೈತ್ರಿಕೂಟ ಅಧಿಕಾರಕ್ಕೇರಿದಾಗಿನಿಂದ ಬಿಜೆಪಿ, ಲಾಲು ಪ್ರಸಾದ್ ಯಾದವ್ ಸೂಪರ್ ಮುಖ್ಯಮಂತ್ರಿ, ಜಾತ್ಯಾತೀತ ಮೈತ್ರಿಕೂಟದ ಮೇಲೆ ಅತಿಯಾದ ಪ್ರಭಾವ ಬೀರುತ್ತಿದ್ದಾರೆ ಎಂದು ಕಿಚಾಯಿಸುತ್ತಲೇ ಬಂದಿದೆ. 

ವೆಬ್ದುನಿಯಾವನ್ನು ಓದಿ