ಬಿಹಾರ್ ವಿಧಾನಸಭೆ ಚುನಾವಣೆ: ದಲಿತ ಸಮುದಾಯದ ಓಲೈಕೆಯತ್ತ ಬಿಜೆಪಿ ಚಿತ್ತ

ಗುರುವಾರ, 26 ಮಾರ್ಚ್ 2015 (17:14 IST)
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಮುಗ್ಗರಿಸಿದ್ದ ಬಿಜೆಪಿ, ಇದೀಗ ಬಿಹಾರ್‌ನಲ್ಲಿ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ದಲತ ಸಮುದಾಯದ ಓಲೈಕೆಗೆ ಮುಂದಾಗಿದೆ.  

ಅಂಬೇಡ್ಕರ್ ಜಯಂತಿ ದಿನದಂದು ದಲಿತ ಸಮುದಾಯವನ್ನು ಸೆಳೆಯಲು ಮೆಗಾ ಸಾರ್ವಜನಿಕ ಸಮಾರಂಭಗಳನ್ನು ಆಯೋಜಿಸಲು ನಿರ್ಧರಿಸಿದೆ. ಹಿಂದುಳಿದ ಸಮುದಾಯವನ್ನು ಆಕರ್ಷಿಸಲು ದೇಶಾದಂತ್ಯ ಕಾರ್ಯಕ್ರಮಗಳನ್ನು ಆಯೋಜಿಸಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ.

ಬಿಹಾರ್ ರಾಜ್ಯದಲ್ಲಿ ಶೇ.15 ರಷ್ಟು ಮತದಾರರು ದಲಿತ ಸಮುದಾಯಕ್ಕೆ ಸೇರಿದ್ದರಿಂದ ದಲಿತರ ಓಲೈಕೆಗೆ ಬಿಜೆಪಿ ಮುಂದಾಗಿದೆ. ದಲಿತ ನಾಯಕರ ಹೆಸರಿನಲ್ಲಿ ಪೋಸ್ಟಲ್ ಸ್ಪ್ಯಾಂಪ್ ಬಿಡುಗಡೆಗೊಳಿಸುವಂತೆ ಬಿಜೆಪಿ ನಾಯಕರು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ