ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, "ಪ್ರಧಾನಿಯಾಗಿ ಭೃಷ್ಟಾಚಾರದ ನಡೆದಾಗ ಸುಮ್ಮನಿದ್ದಿದ್ದೇಕೆ? 2ಜಿ ಸ್ಪ್ರೆಕ್ಟ್ರ ಹಗರಣದ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕಿದೆ", ಎಂದು ಆಗ್ರಹಿಸಿದ್ದಾರೆ.
"ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಭೃಷ್ಟಾಚಾರ ತಾಂಡವಾಡುತ್ತಿತ್ತು. ಬೆಲೆ ಏರಿಕೆ, ಭೃಷ್ಟಾಚಾರದಿಂದ ಜನರು ತತ್ತರಿಸಿ ಹೋಗಿದ್ದರು. ಮೋದಿ ಸರಕಾರದಿಂದ ದೇಶ ಭೃಷ್ಟಾಚಾರ ಮುಕ್ತವಾಗಿದೆ. ಮುರಿದಿರುವ ಅರ್ಥವ್ಯವಸ್ತೆಯ ಜೋಡನೆಗೆ ನಮ್ಮ ಸರ್ಕಾರ ಪ್ರಯತ್ನ ನಡೆಸಿದೆ", ಎಂದು ಕಾಂಗ್ರೆಸ್ ನೇತೃತ್ವದ ಹಿಂದಿನ ಸರಕಾರಕ್ಕೆ ನೇರ ಆರೋಪ ಹೊರಿಸಿರುವ ಪಾತ್ರ ತಮ್ಮ ಸರಕಾರದ ಸಾಧನೆಗಳ ಕುರಿತು ಹೇಳಿಕೊಂಡಿದ್ದಾರೆ.