ರಾಮಮಂದಿರ ನಿರ್ಮಾಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಅಮಿತ್ ಶಾ

ಬುಧವಾರ, 27 ಮೇ 2015 (17:47 IST)
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಕುರಿತಂತೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.
 
ಅಯೋಧ್ಯೆಯಲ್ಲಿ ರಾಮಮಂದಿರ ಮತ್ತು ಸೆಕ್ಷನ್ 370 ಜಾರಿಗೊಳಿಸಲು ಅಗತ್ಯವಾದ ಬಹುಮತಜ ಕೊರತೆಯಿದೆ. ಇಂತಹ ವಿಷಯಗಳನ್ನು ಜಾರಿಗೆ ತರಲು ಬಿಜೆಪಿಗೆ 370 ಸಂಸದರ ಅಗತ್ಯವಿದೆ ಎಂದರು.
 
ಬಿಜೆಪಿ ಪಕ್ಷಕ್ಕೆ ರಾಜ್ಯಸಭೆಯಲ್ಲಿ ಬಹುಮತದ ಕೊರತೆಯಿದ್ದರಿಂದ ರಾಮ ಮಂದಿರ ನಿರ್ಮಿಸುವ ಮಸೂದೆಗೆ ಬೆಂಬಲ ಪಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
 
ಕಳೆದ ವರ್ಷ ನಡೆದ ಲೋಕಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿಯೇ ತೀರುವುದಾಗಿ ಬಿಜೆಪಿ ದೇಶದ ಜನತೆಗೆ ಭರವಸೆ ನೀಡಿತ್ತು.
 
ಜಮ್ಮು ಕಾಶ್ಮಿರಕ್ಕೆ 370 ಸೆಕ್ಷನ್ ಜಾರಿಗೊಳಿಸುವ ಮತ್ತು ಯೂನಿಫಾರ್ಮ್ ಸಿವಿಲ್ ಕೋಡ್ ಜಾರಿಗೊಳಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು
 

ವೆಬ್ದುನಿಯಾವನ್ನು ಓದಿ