ದೇಶವಿರೋಧಿ ಘೋಷಣೆಗಳ ವಿವಾದಗಳು ಉಲ್ಘಣವಾಗಿರುವ ಸಂದರ್ಭದಲ್ಲಿಯೇ ಬಿಜೆಪಿ ನಾಯಕರೊಬ್ಬರು, ಒಂದು ವೇಳೆ, ಯಾರಾದರೂ ದೇಶ ವಿರೋಧಿ ಘೋಷಣೆ ಕೂಗಿದಲ್ಲಿ ಆರು ಇಂಚ್ಗಳಷ್ಟು ಕತ್ತರಿಸಿಹಾಕುವುದಾಗಿ ಹೇಳಿ ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ.
ಬೀರ್ಭೂಮಿ ಜಿಲ್ಲೆಯ ಸಿಯೂರಿ ಪಟ್ಟಣದಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ, ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ದೇಶ ದ್ರೋಹಿ ಘೋಷಣೆಗಳನ್ನು ಕೂಗುವವರ ರುಂಡ ಕತ್ತರಿಸಿಹಾಕುವುದಾಗಿ ಬೆದರಿಕೆಯೊಡ್ಡಿದ್ದಾರೆ.