ಬಿಹಾರ್‌ನಲ್ಲಿ ಕಸಾಯಿಖಾನೆ ಬಂದ್‌ಗೆ ಬಿಜೆಪಿ ಶಾಸಕರ ಒತ್ತಾಯ

ಬುಧವಾರ, 29 ಮಾರ್ಚ್ 2017 (14:39 IST)
ರಾಜ್ಯದಲ್ಲಿರುವ ಎಲ್ಲಾ ಕಸಾಯಿಖಾನೆಗಳನ್ನು ಬಂದ್ ಮಾಡುವಂತೆ ಬಿಜೆಪಿ ಶಾಸಕರು ಮುಖ್ಯಮಂತ್ರಿ ನಿತೀಶ್ ಕುಮಾರ್‌ಗೆ ಒತ್ತಾಯಿಸಿದ್ದಾರೆ.
 
ಒಂದು ವೇಳೆ, ಕಸಾಯಿಖಾನೆಗಳನ್ನು ಬಂದ್ ಮಾಡದಿದ್ದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಬಿಜೆಪಿ ಶಾಸಕರು ಎಚ್ಚರಿಸಿದ್ದಾರೆ.
 
ಉತ್ತರಪ್ರದೇಶದ ಸರಕಾರ ರಾಜ್ಯದಾದ್ಯಂತ ಕಸಾಯಿಖಾನೆಗೆ ನಿಷೇಧ ಹೇರಿ ಆದೇಶ ಹೊರಡಿಸಿದೆ. ಅದರಂತೆ ಬಿಹಾರ್ ರಾಜ್ಯದಲ್ಲೂ ಕಸಾಯಿಖಾನೆಗೆ ನಿಷೇಧ ಹೇರಬೇಕು ಎಂದು ಆಗ್ರಹಿಸಿದ್ದಾರೆ.
 
ಬಿಜೆಪಿ ಅಡಳಿತವಿರುವ ಎಲ್ಲಾ ರಾಜ್ಯಗಳಲ್ಲಿ ಕಸಾಯಿಖಾನೆಗಳನ್ನು ಬಂದ ಮಾಡಲು ಸರಕಾರಗಳು ಚಿಂತನೆ ನಡೆಸಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ