ಕೆಲ ದಿನಗಳ ಹಿಂದೆ ಕೂಡ ಮುಸ್ಲಿಮರ ವಿರುದ್ಧ ಹೇಳಿಕೆಯನ್ನು ನೀಡಿದ್ದ ಅವರು ತಮ್ಮ ಕ್ಷೇತ್ರ ಇಂದೋರ್(3)ನಲ್ಲಿ ಅಲ್ಪಸಂಖ್ಯಾತ ಸಮುದಾಯದವರರನ್ನು ನವರಾತ್ರಿ ಸಮಯದಲ್ಲಿ ನಡೆಯುವ ಗಾರ್ಬಾದಲ್ಲಿ ಪ್ರವೇಶಿಸಲು ಅವಕಾಶ ನೀಡಬೇಡಿ ಎಂದು ಪಕ್ಷದ ಕಾರ್ಯಕರ್ತರ ಬಳಿ ಕೇಳಿಕೊಂಡಿದ್ದರು. ಈ ಸಂದರ್ಭವನ್ನು ಮುಸ್ಲಿಮ್ ಯುವಕರು ಲವ್ ಜಿಹಾದ್ ನಡೆಸಲು ಬಳಸಬಹುದೆಂಬುದು ಅವರ ಅಭಿಪ್ರಾಯವಾಗಿತ್ತು. ಅಲ್ಪಸಂಖ್ಯಾತ ಸಮುದಾಯದವರು ಗಾರ್ಬಾದಲ್ಲಿ ಪಾಲ್ಗೊಳ್ಳಲು ಬಯಸುವುದಾದರೆ ತಮ್ಮ ಪರಿವಾರದ ತಾಯಿ, ಸಹೋದರಿ ಅಥವಾ ಪತ್ನಿಯ ಜತೆ ಬರಲಿ ಎಂದು ಅವರು ಹೇಳಿದ್ದರು.