ಮಹಾರಾಷ್ಟ್ರ, ಹರಿಯಾಣಾ ಚುನಾವಣೆ ಫಲಿತಾಂಶ: ಇಂದು ಸಂಜೆ ಬಿಜೆಪಿ ಸಂಸದೀಯ ಮಂಡಳಿ ಸಭೆ
ಭಾನುವಾರ, 19 ಅಕ್ಟೋಬರ್ 2014 (16:03 IST)
ಇಂದು ಸಂಜೆ 6 ಗಂಟೆಗೆ ಸಭೆ ಸೇರಲಿರುವ ಭಾರತೀಯ ಜನತಾ ಪಕ್ಷದ ಸಂಸದೀಯ ಮಂಡಳಿ ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನ ಸಭಾ ಚುನಾವಣೆಗಳ ಫಲಿತಾಂಶದ ಕುರಿತು ಚರ್ಚಿಸಲಿದೆ.
ಎರಡು ರಾಜ್ಯಗಳಲ್ಲಿ ಗೆಲುವು ಸಾಧಿಸುವುದು ಬಹುತೇಕ ಖಚಿತಗೊಂಡಿರುವುದರಿಂದ ಮುಂದಿನ ನಡೆಯ ಬಗ್ಗೆ ಸಭೆ ತೀರ್ಮಾನ ಕೈಗೊಳ್ಳಲಿದೆ.
ಹರಿಯಾಣದಲ್ಲಿ ಪಕ್ಷ ಸ್ಪಷ್ಟ ಬಹುಮತ ಪಡೆದರೆ ಮುಖ್ಯಮಂತ್ರಿಯಾಗಲು ಆಕಾಂಕ್ಷಿಗಳ ಪಟ್ಟಿಯಲ್ಲಿ ಡಜನ್ಗಟ್ಟಲೆ ಹೆಸರುಗಳು ಕೇಳಿಬರುತ್ತಿವೆ.
ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಗಾದಿಯ ರೇಸ್ನಲ್ಲಿರುವ ಪ್ರಮುಖರೆಂದರೆ ದೇವೇಂದ್ರ ಫಢ್ನವೀಸ್, ವಿನೋದ್ ತಾಬ್ಡೆ, ಏಕನಾಥ್ ಖಡ್ಸೆ ಮತ್ತು ಪಂಕಜ ಮುಂಡೆ ಪ್ರಮುಖರಾಗಿದ್ದಾರೆ.
ಬಿಜೆಪಿ ಸ್ವತಂತ್ರವಾಗಿ ಸರ್ಕಾರವನ್ನು ರಚಿಸುವ ಕುರಿತು ವಿಶ್ವಾಸ ಹೊಂದಿದೆ, ಚುನಾವಣಾಪೂರ್ವದಲ್ಲಿ ತಾನು ಸಖ್ಯ ಮುರಿದುಕೊಂಡಿರುವ 25 ವರ್ಷಗಳ ಮಿತ್ರ ಶಿವಸೇನೆ ಜತೆ ಕೂಡಿಕೊಂಡು ಸರಕಾರವನ್ನು ರಚಿಸುವ ಸಂಕೇತವನ್ನು ಕೂಡ ಬಿಜೆಪಿ ನೀಡುತ್ತಿದೆ.