ಆಡ್ವಾಣಿ, ಜೋಷಿ, ವಾಜಪೇಯಿಗೆ ಗೇಟ್ ಪಾಸ್ ನೀಡಿದ ಬಿಜೆಪಿ

ಮಂಗಳವಾರ, 26 ಆಗಸ್ಟ್ 2014 (16:08 IST)
ಬಿಜೆಪಿ ಸಂಸದೀಯ ಮಂಡಳಿ ಪುನರ್‌ರಚನೆಗೊಳಿಸಲಾಗಿದ್ದು ಪಕ್ಷದ ಹಿರಿಯ ನಾಯಕರಾದ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ್ ಜೋಷಿ ಮತ್ತು ಮಾಜಿ ಪ್ರದಾನಿ ವಾಜಪೇಯಿಗೆ ಗೇಟ್ ಪಾಸ್ ನೀಡಲಾಗಿದೆ. ಶಿವರಾಜ್ ಸಿಂಗ್, ಜೆ.ಪಿ ನಡ್ಡಾಗೆ ಸ್ಥಾನ ನೀಡಲಾಗಿದೆ.
 
ಹಿರಿಯರಿಗಾಗಿ ಮಾರ್ಗದರ್ಶಕ ಮಂಡಳಿಯೊಂದನ್ನು ಹೊಸತಾಗಿ ಅಸ್ತಿತ್ವಕ್ಕೆ ತರಲಾಗಿದ್ದು, ಅದರಲ್ಲಿ ಆಡ್ವಾಣಿ, ಜೋಷಿ ಸೇರಿದಂತೆ ಇತರ ಹಿರಿಯ ನಾಯಕರಿಗೆ ಅವಕಾಶ ನೀಡಲಾಗಿದೆ.
 
ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್‌ಗೆ ಕೇಂದ್ರ ಚುನಾವಣೆ ಸಮಿತಿ ಸ್ಥಾನ ಮತ್ತು ಸಂಸದೀಯ ಮಂಡಳಿಯಲ್ಲೂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
 
 

ವೆಬ್ದುನಿಯಾವನ್ನು ಓದಿ