ಬಿಜೆಪಿ ಸಂಸದೀಯ ಮಂಡಳಿ ಪುನರ್ರಚನೆಗೊಳಿಸಲಾಗಿದ್ದು ಪಕ್ಷದ ಹಿರಿಯ ನಾಯಕರಾದ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ್ ಜೋಷಿ ಮತ್ತು ಮಾಜಿ ಪ್ರದಾನಿ ವಾಜಪೇಯಿಗೆ ಗೇಟ್ ಪಾಸ್ ನೀಡಲಾಗಿದೆ. ಶಿವರಾಜ್ ಸಿಂಗ್, ಜೆ.ಪಿ ನಡ್ಡಾಗೆ ಸ್ಥಾನ ನೀಡಲಾಗಿದೆ.
ಹಿರಿಯರಿಗಾಗಿ ಮಾರ್ಗದರ್ಶಕ ಮಂಡಳಿಯೊಂದನ್ನು ಹೊಸತಾಗಿ ಅಸ್ತಿತ್ವಕ್ಕೆ ತರಲಾಗಿದ್ದು, ಅದರಲ್ಲಿ ಆಡ್ವಾಣಿ, ಜೋಷಿ ಸೇರಿದಂತೆ ಇತರ ಹಿರಿಯ ನಾಯಕರಿಗೆ ಅವಕಾಶ ನೀಡಲಾಗಿದೆ.