"ಪಕ್ಷದ ನೀತಿ ನಿಯಮಗಳು, ಚುನಾವಣಾ ಚಿಹ್ನೆ ಇವೇ ಮುಂತಾದ ಪ್ರಮುಖ ವಿಷಯಗಳ ಬಗ್ಗೆ ನಿರ್ಧರಿಸಲು ಸಮಿತಿಯನ್ನು ರಚಿಸಲಾಗಿದೆ", ಎಂದು ಅವರು ತಿಳಿಸಿದ್ದಾರೆ.
"ಮುಲಾಯಂ ಸಿಂಗ್ ಅವರ ನಾಯಕತ್ವದಲ್ಲಿ ಎಲ್ಲ ಪಕ್ಷಗಳು ಜತೆ ಸೇರಿವೆ. ಸಮಾಜವಾದಿ ಪಕ್ಷದ ಸದಸ್ಯರು ಸಹ ವಿಲೀನದ ಸಮಯದಲ್ಲಿ ಹಾಜರಿದ್ದರು. ಆದಷ್ಟು ಬೇಗ ನಾವು ಪಕ್ಷದ ಹೆಸರು, ಬಾವುಟ, ಹಿಹ್ನೆ ,ಪಕ್ಷದ ಸಿದ್ಧಾಂತಗಳು ಮತ್ತು ನೀತಿ ನಿಯಮಗಳ ಬಗ್ಗೆ ನಿರ್ಧರಿಸಲಿದ್ದೇವೆ", ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಜನತಾ ಪರಿವಾರ ವಿಲೀನದ ಕುರಿತು ಪ್ರತಿಕ್ರಿಯಿಸಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, 'ಸೊನ್ನೆಯನ್ನು ಸೊನ್ನೆಗೆ ಸೇರಿಸಿದರೆ ಉಳಿಯುವುದು ಸೊನ್ನೆಯೇ (0+0=0). ಬಿಹಾರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ', ಎಂದಿದ್ದರು.