ನಾವು ಅಧಿಕಾರಕ್ಕೆ ತಲುಪಲು ಕಾರಣರಾದವರು ಪಕ್ಷದ ಕಾರ್ಯಕರ್ತರೇ. ಆದ್ದರಿಂದ 'ನಿಮ್ಮ ಜಿಲ್ಲೆ, ನಿಮ್ಮ ಸರ್ಕಾರ' ಕಾರ್ಯಕ್ರಮದಡಿ ನಾನು ಪಕ್ಷದ ಕಾರ್ಯಕರ್ತರ ಬಳಿ ಹೋಗಿ ಜಿಲ್ಲೆಯಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಅವರಿಂದ ಮಾಹಿತಿ ಪಡೆಯುತ್ತೇನೆ. ಮುಂದಿನ ಚುನಾವಣೆಯಲ್ಲಿ ಸಹ ಜಯವನ್ನು ಖಾತ್ರಿ ಪಡಿಸುವುದರತ್ತ ಪಕ್ಷದ ಕಾರ್ಯಕರ್ತರು ಸಜ್ಜಾಗುತ್ತಿದ್ದಾರೆ ಎಂದು ರಾಜೆ ತಿಳಿಸಿದ್ದಾರೆ.