ಡಾ.ಜಿ.ಪರಮೇಶ್ವರ್ ಬೆಂಬಲಿಗರಿಂದ ಪತ್ರಿಕಾ ಕಚೇರಿಯಲ್ಲಿ ದಾಂಧಲೆ

ಗುರುವಾರ, 24 ಜುಲೈ 2014 (09:28 IST)
ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರ ವಿರುದ್ಧ ಪತ್ರಿಕೆಯೊಂದರಲ್ಲಿ ಲೇಖನ ಪ್ರಕಟವಾಗಿದ್ದಕ್ಕೆ ಅಸಮಾಧಾನಗೊಂಡ ಅವರ ಬೆಂಬಲಿಗರು ಪತ್ರಿಕಾ ಕಚೇರಿಗೆ ನುಗ್ಗಿ  ಗಲಾಟೆ ಮಾಡಿದ ಘಟನೆ ತುಮಕೂರಿನಲ್ಲಿ ನಡೆದಿದೆ.

ರಾಜ್ಯದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಬೇಡ ಎಂದು ಖರ್ಗೆ ಹೇಳಿದ್ದಾರೆ ಎಂದು ಜುಲೈ 22 ರಂದು ಲೇಖನ ಪ್ರಕಟಿಸಿದ್ದಕ್ಕೆ ಕೋಪಗೊಂಡ ಪರಮೇಶ್ವರ್ ಬೆಂಬಲಿಗರು, ತುಮಕೂರಿನ ಬಿ ಎಚ್ ರಸ್ತೆಯಲ್ಲಿರುವ ಸ್ಥಳೀಯ ದಿನಪತ್ರಿಕೆಯೊಂದರ ಕಚೇರಿಗೆ ಏಕಾಯೇಕಿ ನುಗ್ಗಿ ಸಿಬ್ಬಂದಿಗಳ ಜತೆ ವಾಗ್ವಾದಕ್ಕಿಳಿದಿದ್ದಾರೆ. 
 
ಡಿಸಿಎಂ ಹುದ್ದೆ ಬೇಡ ಎಂದು ಖರ್ಗೆ ನಿಮಗೆ ಹೇಳಿದ್ದಾರೆಯೇ ಎಂದು ಪ್ರಶ್ನಿಸಿ ಸಿಬ್ಬಂದಿಗಳ ಜತೆ ಗಲಾಟೆ ಮಾಡಿದ ಕೆಪಿಸಿಸಿ ಅಧ್ಯಕ್ಷರ ಬೆಂಬಲಿಗರು ಸೆಕ್ಯುರಿಟಿ ಗಾರ್ಡ ಮೇಲೆ ಹಲ್ಲೆ ನಡೆಸಲು ಕೂಡ ಪ್ರಯತ್ನಿಸಿದ್ದಾರೆ  ಎಂದು ತಿಳಿದು ಬಂದಿದೆ.  ಆ ಸಮಯದಲ್ಲಿ ಸಂಪಾದಕರು ಕಚೇರಿಯಲ್ಲಿರಲಿಲ್ಲ.  
 
ಈ ಕುರಿತು ಹೊಸ ಬಡಾವಣೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವೆಬ್ದುನಿಯಾವನ್ನು ಓದಿ