ಕಾರ್ಮಿಕನ ಅಂಗಾಂಗ ಕದ್ದ ಮಾಲೀಕ?

ಶುಕ್ರವಾರ, 3 ಏಪ್ರಿಲ್ 2015 (10:55 IST)
ಸೌಧಿ ಅರೇಬಿಯಾದಲ್ಲಿ ಸಾವಿಗೀಡಾಗಿದ್ದ ವ್ಯಕ್ತಿಯೊಬ್ಬನ ದೇಹವನ್ನು ಭಾರತಕ್ಕೆ ತಂದು ಮರಣೋತ್ತರ ಪರೀಕ್ಷೆ ನಡೆಸಿದಾಗ ಆತನ ದೇಹದಲ್ಲಿನ ಅಂಗಾಂಗಳು ನಾಪತ್ತೆಯಾಗಿದ್ದು ಹಲವು ಶಂಕೆಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಕುರಿತು ಹೆಚ್ಚಿನ ತನಿಖೆಗೆ ಆಗ್ರಹಿಸುವಂತೆ ಸ್ಥಳೀಯ ರಾಜಕಾರಣಿಗಳು ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಮತ್ತು ಎನ್‌ಎಚ್ಆರ್‌ಸಿಗೆ ಆಗ್ರಹಿಸಿವೆ. 


 
2013ರಲ್ಲಿ ಸೌಧಿಗೆ ತೆರಳಿದ್ದ ಉತ್ತರ ಪ್ರದೇಶದ  ರಾಮ್ದೀನ್ ಉತ್ತಮ ಕೆಲಸ ಸಿಗದಿದ್ದುದರಿಂದ ಕಾರ್ಮಿಕನಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದ. ಕಳೆದ ಎಪ್ರೀಲ್ 30, 2014ರಂದು ಕೊನೆಯ ಬಾರಿ ತನ್ನ ಪತ್ನಿಗೆ ಕರೆ ಮಾಡಿದ್ದ ಆತ ನನ್ನ ಮಾಲೀಕ ನನ್ನನ್ನು ಸಾಯಿಸುತ್ತಾನೆ ಎಂದು ಹೇಳಿಕೊಂಡಿದ್ದ. ಕಳೆದ 10 ತಿಂಗಳ ಹಿಂದೆ ಆತ ಆಕಸ್ಮತ್ತಾಗಿ ಸಾವನಪ್ಪಿದ್ದು ಆತನ ದೇಹವನ್ನು ಕಳೆದ ಫೆಬ್ರವರಿ ತಿಂಗಳಲ್ಲಿ ಭಾರತಕ್ಕೆ ತರಲಾಗಿತ್ತು. 
 
ಮರಣೋತ್ತರ ಪರೀಕ್ಷೆ ನಡೆಸಿದಾಗ ಆತನ ದೇಹದಲ್ಲಿ ಕಿಡ್ನಿ ಸೇರಿದಂತೆ ಅನೇಕ ದೇಹಗಳು ನಾಪತ್ತೆಯಾಗಿರುವುದು ಕಂಡುಬಂದಿದೆ. ಹೀಗಾಗಿ ಮಾಲೀಕನೇ ಆತನನ್ನು ಕೊಂದಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. 

ವೆಬ್ದುನಿಯಾವನ್ನು ಓದಿ