ದೇವಸ್ಥಾನದ ಗಂಟೆಗೆ ನೇಣು ಬೀಗಿದ ಸ್ಥಿತಿಯಲ್ಲಿ ಪತ್ತೆಯಾದ ಐಎಎಸ್ ಆಕಾಂಕ್ಷಿ

ಶನಿವಾರ, 10 ಅಕ್ಟೋಬರ್ 2015 (12:15 IST)
ಉತ್ತರ ಪ್ರದೇಶದ ಕಾನ್ಪುರದಲ್ಲಿ ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವತಿಯೋರ್ವಳು ಶುಕ್ರವಾರ ನಗರದ ರಾಮೇಶ್ವರ ಧಾಮ ದೇವಸ್ಥಾನದ ದೊಡ್ಡ ಗಂಟೆಯೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. 

ಈ ಕುರಿತು ಪ್ರತಿಕ್ರಿಯಿಸಿರುವ ಮೃತಳ ಕುಟುಂಬ, ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಸಿನವಳಲ್ಲ. ಇದೊಂದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದಾರೆ. ಆದರೆ ಸ್ಥಳದಲ್ಲಿ  ಸುಸೈಡ್ ನೋಟ್ ಸಹ ಕಂಡು ಬಂದಿದ್ದು ಅದನ್ನು ವಶಪಡಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ
 
ಕಳೆದ ಬುಧವಾರ ಐಎಎಸ್ ತರಬೇತಿ ತರಗತಿಗೆಂದು ಹೋಗಿದ್ದ ಯುವತಿ ಮೋನಿ ಮನೆಗೆ ಹಿಂತಿರುಗದಿದ್ದಾಗ ಆಕೆಯ ಪೋಷಕರು ನವಾಬ್‌ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. 
 
ಆದರೆ ಮೋನಿ ಮೃತ ದೇಹ ದೇವಸ್ಥಾನದ ಗಂಟೆಗೆ ನೇಣು ಬೀಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಪಾದ ನೆಲಕ್ಕೆ ಸ್ಪರ್ಶಿಸುತ್ತಿದ್ದು, ಮೂಗಿನಿಂದ ರಕ್ತ ಸೋರುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
 
ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. 

ವೆಬ್ದುನಿಯಾವನ್ನು ಓದಿ