ನನಗಿದ್ದದ್ದು ಒಬ್ಬನೇ ಮಗ, ನಾನು ಅವನನ್ನು ಸೇನೆಗೆ ನೀಡಿದೆ. ಅಪ್ಪನಾದವನು ಹೆಮ್ಮೆ ಪಡುವ ವಿಷಯ ಇದು. ಆತ ಸೇನಾ ದಿವಸ್ನಂದೇ ಹುಟ್ಟಿದ್ದನಾದ್ದರಿಂದ ಸೇನೆಗೆ ಸೇರುವುದು ಆತನ ಹಣೆಯಲ್ಲಿ ಬರೆದಿತ್ತು. ಈ ಹಿಂದೆ ಆತ ಎರಡು ಯಶಸ್ವಿ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದ. ಮೂವರು ಉಗ್ರರನ್ನು ಹೊಡೆದುರುಳಿಸಿದ್ದ ಎಂದು ಕ್ಯಾಪ್ಟನ್ ಪವನ್ ಕುಮಾರ್ ಅವರ ಅಪ್ಪ ರಾಜ್ಬೀರ್ ಸಿಂಗ್ ಹೇಳಿದ್ದಾರೆ.
ಜಮ್ಮು ಕಾಶ್ಮೀರದ ಪಾಂಪೋರ್ನಲ್ಲಿ ಉಗ್ರರು ಮತ್ತು ಭಾರತೀಯ ಯೋಧರ ನಡುವೆ ನಿನ್ನೆಯಿಂದ ಗುಂಡಿನ ಚಕಮಕಿ ನಡೆಯುತ್ತಿದೆ. ಕಾರ್ಯಾಚರಣೆಯಲ್ಲಿ ಕ್ಯಾಪ್ಟನ್ ಪವನ್ ಕುಮಾರ್ ಸೇರಿದಂತೆ ಅರೆಸೇನಾ ಪಡೆಯ 2 ಯೋಧರು, ಇಬ್ಬರು ಸಿಆರ್ಪಿಎಫ್ ಯೋಧರು ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಉಗ್ರರ ಗುಂಡಿಗೆ ಓರ್ವ ನಾಗರಿಕ ಕೂಡ ಅಸುನೀಗಿದ್ದಾನೆ ಎಂದು ವರದಿಯಾಗಿದೆ. ಸಿಆರ್ಪಿಎಫ್ನ 13 ಪೊಲೀಸರಿಗೆ ಗಾಯಗಳಾಗಿದೆ.