ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್, ಸೋಮನಾಥ ದೇವಾಲಯ ನಿರ್ಮಾಣಕ್ಕಾಗಿ ಜನತೆಯ ಬಳಿ ಹೋಗಲಿಲ್ಲ. ಅಥವಾ ದೇವಾಲಯ ನಿರ್ಮಾಣಕ್ಕೆ ಕೋರ್ಟ್ ಆದೇಶಕ್ಕಾಗಿ ನಿರೀಕ್ಷಿಸಲಿಲ್ಲ. ಆದರೆ, ಸಂಸತ್ತಿನಲ್ಲಿ ಕಾನೂನು ಜಾರಿಗೊಳಿಸಿ ದೇವಾಲಯ ನಿರ್ಮಿಸಿದರು. ಅದರಂತೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.