ಸೋಮವಾರ ಕೆಲವು ಸುದ್ದಿವಾಹಿನಿಗಳು ಭೂ ಸ್ವಾಧೀನ ಮಸೂದೆ ಮಸೂದೆಯನ್ನು ಜಾರಿ ಮಾಡಲು ಕೇಂದ್ರ ಸರ್ಕಾರಕ್ಕೆ ತಮ್ಮ ಪಕ್ಷ ಬೆಂಬಲ ನೀಡಲಿದೆ ಎಂಬ ಸುದ್ದಿಯನ್ನು ಪ್ರಸಾರ ಮಾಡಿದ್ದವು. ಆದರೆ ನಾನದನ್ನು ತಳ್ಳಿ ಹಾಕುತ್ತೇನೆ. ಈ ಮಸೂದೆ ಸಂಪೂರ್ಣವಾಗಿ ರೈತ ವಿರೋಧಿಯಾಗಿದೆ. ಇದು ಉದ್ಯಮಪತಿಗಳ ಪರವಾದ ಮಸೂದೆ. ನಮ್ಮ ಪಕ್ಷ ಇದಕ್ಕೆ ಬೆಂಬಲ ನೀಡುವುದಿಲ್ಲ ಎಂದು ಮಾಧ್ಯಮಗಳ ಜತೆ ಮಾತನಾಡುತ್ತಿದ್ದ ಮಾಯಾವತಿ ಸ್ಪಷ್ಟಪಡಿಸಿದ್ದಾರೆ.