ಗಾಂಧೀಜಿ ಕನಸಿನ ಭಾರತವನ್ನು ನಿರ್ಮಿಸಿ: ಮೋದಿ

ಗುರುವಾರ, 2 ಅಕ್ಟೋಬರ್ 2014 (13:45 IST)
ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ರಾಜಘಾಟ್‌ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಗೆ ನಮನ ಸಲ್ಲಿಸಿ  ಬಾಪೂಜಿ ಅವರ ಕನಸಿನ ಭಾರತವನ್ನು ನಿರ್ಮಿಸಲು ಸಹಾಯ ಮಾಡಿ ಎಂದು ದೇಶವಾಸಿಗಳಲ್ಲಿ ವಿನಂತಿಸಿಕೊಂಡರು.  

"ಮಹಾತ್ಮ ಗಾಂಧಿಯವರ ಜನ್ಮ ವಾರ್ಷಿಕೋತ್ಸವದಂದು ನಾನು ಅವರಿಗೆ ನಮಸ್ಕರಿಸುತ್ತೇನೆ " ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
 
"ಗಾಂಧೀಜಿಯವರ ಆಲೋಚನೆ ಮತ್ತು ನಂಬಿಕೆಗಳು ನಮಗೆ ದೊಡ್ಡ ಸ್ಫೂರ್ತಿಯಾಗಿವೆ. ಗಾಂಧೀಜಿಯವರ ಕನಸಿನ ಭಾರತ ನಿರ್ಮಿಸಲು ನಮ್ಮನ್ನು ನಾವು ಅರ್ಪಿಸಿಕೊಳ್ಳೋಣ " ಎಂದು ಅವರು ಹೇಳಿದರು.
 
ತಮ್ಮ ಮಹಾತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡುವ ಮುನ್ನ ಮೋದಿ ಗಾಂಧೀಜಿಯವರ ಸಮಾಧಿ ಇರುವ ರಾಜಘಾಟ್‌ಗೆ ಭೇಟಿ ನೀಡಿದ್ದರು. 
 
2019ರಲ್ಲಿ ನಡೆಯಲಿರುವ ಗಾಂಧೀಜಿಯವರ 150 ನೇ ಜನ್ಮದಿನೋತ್ಸವಕ್ಕೆ ನಿರ್ಮಲ ಭಾರತ ನಿರ್ಮಾಣ ಅಭಿಯಾನವನ್ನು ಸಂಪನ್ನಗೊಳಿಸುವುದು ಅವರಿಗೆ ನೀಡುವ ಅತ್ಯುತ್ತಮ ಗೌರವ ಎಂದು ಮೋದಿ ಅಭಿಪ್ರಾಯ ಪಟ್ಟಿದ್ದಾರೆ. ಇಂದು ದೇಶ ಮಹಾತ್ಮಾ ಗಾಂಧಿಯವರ 145 ನೇ ಜಯಂತಿಯ ಸಡಗರದಲ್ಲಿದೆ.

ವೆಬ್ದುನಿಯಾವನ್ನು ಓದಿ