ಜಮಾಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಮಹಮೂದ್ ಮದನಿ ಕೂಡಾ ಇಸ್ರೇಲ್ ಏಜೆಂಟ್ ಎಂದು ವಾಗ್ದಾಳಿ ನಡೆಸಿದ ಆಜಂ ಖಾನ್, ಒಂದು ವೇಳೆ, ನನ್ನ ಮಗ ಹಿಂದೂ ಯುವತಿಯನ್ನು ವಿವಾಹವಾದಲ್ಲಿ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆ. ಆದರೆ, ಬುಖಾರಿ ಪುತ್ರ ಹಿಂದೂ ಯುವತಿಯನ್ನು ವಿವಾಹವಾದಲ್ಲಿ ಆರೆಸ್ಸೆಸ್ ಮೌನವಾಗಿರುತ್ತದೆ ಎಂದು ಕಿಡಿಕಾರಿದರು.
ಇದಕ್ಕಿಂತ ಮೊದಲು ಬುಖಾರಿ, ರಾಜ್ಯದಲ್ಲಿ ಬಿಜೆಪಿ ಬೆಂಬಲಿಸುವಂತೆ ಕರೆ ನೀಡಿ ಮುಸ್ಲಿಂ ಸಮುದಾಯದ ದಾರಿ ತಪ್ಪಿಸುವ ಕೃತ್ಯ ಮಾಡಿದ್ದರು ಎಂದು ಟೀಕಿಸಿದ ಆಜಂ, ಬುಖಾರಿ ಧಾರ್ಮಿಕ ಕಾರ್ಯಗಳಲ್ಲಿ ಮಾತ್ರ ತೊಡಗಿಕೊಳ್ಳಲಿ. ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದು ಬೇಡ ಎಂದು ಸಲಹೆ ನೀಡಿದ್ದಾರೆ.