ಫುಡ್ ಕ್ರಾಫ್ಟ್ ಸಂಸ್ಥೆಯ ಉದ್ಘಾಟನೆಯಲ್ಲಿ ಅವರು ಮಾತನಾಡುತ್ತಾ, ಜಮ್ಮು ಕಾಶ್ಮೀರದ ಜನರ ನೊಂದ ಮನಕ್ಕೆ ಸಾಂತ್ವನ ಹೇಳಲು , ಅವರ ಗಾಯಕ್ಕೆ ಮುಲಾಮು ಲೇಪಿಸಲು ಕಾಂಗ್ರೆಸ್, ಸಿಪಿಎಂ, ಜೆಡಿಯು ಸೇರಿದಂತೆ ದೇಶದ ಇಡೀ ನಾಯಕತ್ವ ಮುಂದೆ ಬಂದು ಶಾಂತಿ ನಿರ್ಮಾಣದ ಉಪಕ್ರಮವನ್ನು ಬೆಂಬಲಿಸಬೇಕು ಎಂದು ಮೆಹಬೂಬಾ ಹೇಳಿದರು.