ಅಲ್ಲದೇ ಅಖಿಲೇಶ್ ವಿವಿಧ ಯೋಜನೆಗಳ ಅಡಿಯಲ್ಲಿ ಎರಡು ಫಲಾನುಭವಿಗಳಿಗೆ ಮನೆ ದುರಸ್ತಿಗೆ ನಿಧಿ, 12 ಫಲಾನುಭವಿಗಳಿಗೆ 50,000 ರೂಪಾಯಿ ಚೆಕ್ ಮತ್ತು 500 ಫಲಾನುಭವಿಗಳಿಗೆ ಸೈಕಲ್ ವಿತರಿಸಿದರು.
ಏತನ್ಮಧ್ಯೆ, ಮುಖ್ಯಮಂತ್ರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಲ್ ಗೇಟ್ಸ್ ಜತೆ ಚರ್ಚಿಸಿದರು. ಯುಪಿ ಸರ್ಕಾರ ಹಾಗೂ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್ ಕೈಗೊಂಡ ಜಂಟಿ ಕೃತಿಗಳ ಪ್ರಗತಿಗಳ ಕುರಿತು ಇಬ್ಬರು ಚರ್ಚಿಸಿದರು. ತಾವು ಕೈಗೊಂಡಿರುವ ಕಾರ್ಯಕ್ರಮಗಳಿಗೆ ಯುಪಿ ಸರಕಾರ ನೀಡುತ್ತಿರುವ ಬೆಂಬಲಕ್ಕೆ ಗೇಟ್ಸ್ ಮೆಚ್ಚುಗೆ ವ್ಯಕ್ತ ಪಡಿಸಿದರು.