ಜೆಡಿಯು ಪಕ್ಷವನ್ನು ತೊರೆದ ಶಾಸಕ ಅನಂತ್ ಸಿಂಗ್: ನಿತೀಶ್ ಕುಮಾರ್‌ಗೆ ಆಘಾತ

ಬುಧವಾರ, 2 ಸೆಪ್ಟಂಬರ್ 2015 (15:49 IST)
ತೋಳ್ಬಲ, ಹಣಬಲ ಮತ್ತು ಅಧಿಕಾರದ ಬಲದಿಂದ ಭೂಗತ ದೊರೆ, ಛೋಟೆ ಸರ್ಕಾರ್ ಎಂದು ಕರೆಸಿಕೊಳ್ಳುವ ಜೆಡಿಯು ಶಾಸಕ ಅನಂತ್ ಸಿಂಗ್ ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ನಿತೀಶ್ ಕುಮಾರ್ ಬಳಗಕ್ಕೆ ತುಂಬಲಾರದ ನಷ್ಟವಾಗಿ ಹೊರಹೊಮ್ಮಿದೆ.
 
ಅಪಹರಣ ಮತ್ತು ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅನಂತ್ ಸಿಂಗ್, ತಮ್ಮ ರಾಜೀನಾಮೆ ಪತ್ರವನ್ನು ಜೆಡಿಯು ಪಕ್ಷದ ರಾಜ್ಯಾಧ್ಯಕ್ಷ ವಷಿಷ್ಠ ನರೈನ್ ಸಿಂಗ್ ಅವರಿಗೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಕಳೆದ ಜೂನ್ ತಿಂಗಳಲ್ಲಿ ಅಪಹರಣ ಮತ್ತು ಹತ್ಯೆ ಆರೋಪದ ಮೇಲೆ ಜೈಲಿಗೆ ತಳ್ಳಲ್ಪಟ್ಟಿದ್ದ ಅನಂತ್ ಸಿಂಗ್ ವಿರುದ್ಧ ಮತ್ತಷ್ಟು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿತ್ತು.
 
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಒತ್ತಡದ ಮೇರೆಗೆ ಮೋಕಾಮಾಹ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಂತ್ ಸಿಂಗ್ ಅವರನ್ನು ಬಂಧಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ