ನಗರದ ಮೊಹಲ್ಲಾ ಸ್ವಾಮಿವಾಡಾ ನಿವಾಸಿಯಾದ ಅಪಹೃತ ಬಾಲಕ ಕಿಶೋರನ ತಂದೆ ಚಿನ್ನದ ಅಂಗಡಿಯನ್ನಿಟ್ಟುಕೊಂಡಿದ್ದಾರೆ. ಶನಿವಾರ ಸಂಜೆ ಆತನ ಮನೆಗೆ ಬಂದ ಸ್ನೇಹಿತರು ಕಂಪ್ಯೂಟರ್ ದುರಸ್ತಿ ಮಾಡಲು ಸಹಾಯ ಮಾಡು ಎಂಬ ನೆಪ ಹೇಳಿ ಆತನನ್ನು ತಮ್ಮ ಜತೆ ಕರೆದುಕೊಂಡು ಹೋದರು. ಒಂದೇ ದ್ವಿಚಕ್ರ ವಾಹನದಲ್ಲಿ ಓಡಾಡುತ್ತ ಆಶ್ರಮವೊಂದರ ಬಳಿ ತಲುಪಿದ ಅವರು ಆಶ್ರಮದಲ್ಲಿನ ಖಾಲಿ ಕೋಣೆಯೊಂದಕ್ಕೆ ಕರೆದುಕೊಂಡು ಹೋಗಿ ಸ್ನೇಹಿತನ ಬಾಯಿಗೆ ರುಮಾಲು ತುರುಕಿ, ಕೈ ಕಾಲು ಕಟ್ಟಿದರು. ದೊಣ್ಣೆಯಿಂದ ಥಳಿಸುತ್ತ ಆತನ ತಂದೆಗೆ ಫೋನ್ ಕರೆ ಮಾಡಿ 5 ಲಕ್ಷ ರೂಪಾಯಿ ನೀಡಿ ಇಲ್ಲದಿದ್ದರೆ ನಿಮ್ಮ ಮಗನನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಒಡ್ಡಿದರು.