ತಾಜ್‌ಮಹಲ್ ಟಿಕೆಟ್‌ಲ್ಲಿ ಕ್ಲೀನ್ ಇಂಡಿಯಾ ಮೆಸೆಜ್

ಮಂಗಳವಾರ, 21 ಅಕ್ಟೋಬರ್ 2014 (09:18 IST)
ವಿಶ್ವಪ್ರಸಿದ್ಧ ಪ್ರೇಮಸೌಧ ತಾಜಮಹಲ್ ಪ್ರವೇಶ ಟಿಕೆಟ್ ಮೇಲಿಗ ಪ್ರಧಾನಿ ನರೇಂದ್ರ ಮೋದಿಯವರ ಕ್ಲೀನ್ ಇಂಡಿಯಾ ಸಂದೇಶವನ್ನು ಮುದ್ರಿಸಲಾಗಿದೆ.

ಬಿಜೆಪಿ ಲೋಕಸಭಾ ಸದಸ್ಯ ರಾಮ್ ಶಂಕರ್ ಕಥೇರಿಯಾ ಭಾನುವಾರ ಈ ಹೊಸ ಟಿಕೆಟ್‌ನ್ನು ಬಿಡುಗಡೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಮಾತನಾಡಿದ ಅವರು "ಸ್ವಚ್ಛತೆ ಬಗೆಗಿನ ಸಂದೇಶ ದೇಶದಾಂದ್ಯಂತ ವ್ಯಾಪಕವಾಗಿ ಪ್ರಸಾರವಾಗಬೇಕಿದೆ"  ಎಂದು ಹೇಳಿದರು.
 
ಇಂತಹ ನಡೆಗಳು ಶುಚಿತ್ವದ ಸಂಕಲ್ಪವನ್ನು ಹೆಚ್ಚಿಸಲು, ಪ್ರೇರೇಪಿಸಲು ಒಂದು ದೊಡ್ಡ ರೀತಿಯಲ್ಲಿ ಸಹಾಯ ಮಾಡಲಿವೆ ಎಂದು ಪುರಾತತ್ವ ಇಲಾಖೆ ಪುರಾತತ್ವ ಇಲಾಖೆ ಮುಖ್ಯಸ್ಶ ಎನ್.ಕೆ.ಪಾಠಕ್ ಅಭಿಪ್ರಾಯ ಪಟ್ಟಿದ್ದಾರೆ. 
 
ತಮ್ಮ ಕನಸಿನ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನಕ್ಕೆ ಪ್ರಧಾನಿ ಮೋದಿಯವರು ಕಳೆದ ಅಕ್ಟೋಬರ್ 2 ರಂದು ಚಾಲನೆ ನೀಡಿದ್ದರು.

ವೆಬ್ದುನಿಯಾವನ್ನು ಓದಿ