ಗಂಗಾನದಿಯನ್ನು ಸ್ವಚ್ಛಗೊಳಿಸಲು ಕೇಂದ್ರ ಸರ್ಕಾರ 'ನಮಾಮಿ ಗ೦ಗೆ' ಅಭಿಯಾನವನ್ನು ಆರಂಭಿಸಿದೆ. ಉತ್ತರ ಪ್ರದೇಶ ಸರ್ಕಾರ ಸಹ ಸ್ವಚ್ಛ ಭಾರತ ಅಭಿಯಾನವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ನದಿಯನ್ನು ಸ್ವಚ್ಛವಾಗಿಡುವಂತೆ ದಡದಲ್ಲಿ ಪೋಸ್ಟರ್ಗಳನ್ನು ಸಹ ಹಾಕಿದೆ. ಹಾಗಿರುವಾಗ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರೇ ಗಂಗಾನದಿಯಲ್ಲಿ ಮೂತ್ರ ವಿಜರ್ಸನೆ ಮಾಡಿದ್ದು ಸಾರ್ವಜನಿಕರಿಂದ ತೀವ್ರ ಖಂಡನೆಗೆ ಗುರಿಯಾಗಿದೆ.
ವಿಪರ್ಯಾಸವೆಂದರೆ ಅವರು ಆ ಸಂದರ್ಭದಲ್ಲಿ "ಕ್ಲೀನ್ ಗ೦ಗಾ' ಬರಹವಿದ್ದ ಟಿ ಶಟ್೯ ಧರಿಸಿದ್ದರು. ತಮ್ಮ ಕೃತ್ಯಕ್ಕೆ ಸ್ಪಷ್ಟನೆ ನೀಡಿರುವ ಅವರು ನನಗೆ ಮಧುಮೇಹ ಕಾಯಿಲೆಯಿದ್ದು, ಮೂತ್ರವನ್ನು ತಡೆಹಿಡಿಯಲಾಗದ್ದಕ್ಕೆ ಅಲ್ಲಿ ಮೂತ್ರ ಮಾಡಿದೆ ಎಂಬ ಅಸಂಬದ್ಧ ಕಾರಣವನ್ನು ನೀಡಿದ್ದಾರೆ.