ಅಗ್ನಿ ಪರೀಕ್ಷೆ ಗೆದ್ದ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ

ಶನಿವಾರ, 18 ಫೆಬ್ರವರಿ 2017 (15:31 IST)
ತಮಿಳುನಾಡು ವಿಧಾನಸಭೆ ಅಧಿವೇಶನದಲ್ಲಿ ಧ್ವನಿಮತದ ಮೂಲಕ ಯಾಚಿಸಲಾದ ವಿಶ್ವಾಸಮತದಲ್ಲಿ ಮುಖ್ಯಮಂತ್ರಿ ಪಳನಿ ಸ್ವಾಮಿ ಜಯಗಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಮುಖ್ಯಮಂತ್ರಿ ಪಳನಿಸ್ವಾಮಿಗೆ 122 ಮತಗಳು ದೊರೆತಿದ್ದು ಅವರ ವಿರುದ್ಧ ಕೇವಲ 11 ಮತಗಳು ಬಂದಿರುವುದು ದೊಡ್ಡದೊಂದು ಹೈಡ್ರಾಮಾಗೆ ತೆರೆ ಬಿದ್ದಿದೆ.
 
ಭಾರಿ ಕೋಲಾಹಲದ ಮಧ್ಯೆಯೂ ವಿಶ್ವಾಸಮತ ಪಾಸ್ ಆಗಿದ್ದು, ಪನ್ನೀರ್ ಸೆಲ್ವಂ ವಿರುದ್ಧದ ಫೈಟ್‌ನಲ್ಲಿ ಪಳನಿಸ್ವಾಮಿಗೆ ಜಯ ದೊರತಂತಾಗಿದೆ.
 
ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷಗಳ ಅನುಪಸ್ಥಿತಿಯಲ್ಲಿ ವಿಶ್ವಾಸಮತ ಯಾಚನೆ ನಡೆದಿದ್ದು, ಕೋಲಾಹಲಗಳ ಮಧ್ಯೆ ವಿಶ್ವಾಸಮತಕ್ಕೆ ಜಯ ದೊರೆತಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ