ಡೈರಿ ವಿವಾದದ ಬಗ್ಗೆ ತುಟಿಬಿಚ್ಚದ ಸಿಎಂ ಸಿದ್ದರಾಮಯ್ಯ

ಶುಕ್ರವಾರ, 24 ಫೆಬ್ರವರಿ 2017 (16:53 IST)
ಕಾಂಗ್ರೆಸ್ ಹೈಕಮಾಂಡ್`ಗೆ ಸಿದ್ದರಾಮಯ್ಯ ಸಾವಿರ ಕೋಟಿ ರೂಪಾಯಿ ಕಪ್ಪ ಕೊಟ್ಟಿದ್ದಾರೆ ಎಂಬ ಆರೋಪ ಕುರಿತಂತೆ ನಿನ್ನೆ ರಾಷ್ಟ್ರೀಯ ಮಾಧ್ಯಮದಲ್ಲಿ ಸಿದ್ದರಾಮಯ್ಯ ಆಪ್ತ ಗೋವಿಂದರಾಜು ಅವರು ಬರೆದಿದ್ದರೆನ್ನಲಾದ ಡೈರಿಯ ವಿವರಗಳು ಬಹಿರಂಗವಾಗಿದ್ದವು. ಡೈರಿಯಲ್ಲಿ ಸಂಕ್ಷಿಪ್ತ ಹೆಸರುಗಳನ್ನ ಬರೆದು ಹಣ ಬಂದ ಮತ್ತು ನೀಡಿದ ಮೊತ್ತವನ್ನ ಸೂಚಿಸಲಾಗಿತ್ತು. ಈ ಕುರಿತಂತೆ ದೇಶಾದ್ಯಂತ ಸುದ್ದಿಯಾಗುತ್ತಿದ್ದರೂ ಸಿಎಂ ಮಾತ್ರ ತುಟಿ ಬಿಚ್ಚಿಲ್ಲ.


ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಚಾಮರಾಜಪೇಟೆಯ ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಯಾರ ಜೊತೆಯೂ ಮಾತನಾಡದೇ 15 ನಿಮಿಷದಲ್ಲಿ ದರ್ಶನ ಮುಗಿಸಿ ಹೊರಟಿದ್ದಾರೆ. ಸ್ಥಳದಲ್ಲಿದ್ದ ಕಾರ್ಯಕರ್ತರ ಜೊತೆಯೂ ಸಿಎಂ ಮಾತನಾಡಿಲ್ಲ.

ಈ ಮಧ್ಯೆ, ದೇಗುಲದಿಂದ ತಮ್ಮ ಅಧಿಕೃತ ನಿವಾಸಕ್ಕೆ ವಾಪಸ್ಸಾದ ಸಿದ್ದರಾಮಯ್ಯ ಬಳಿಕ ಬೆಂಗಾವಲು ವಾಹನ ಬಿಟ್ಟು ಹೊರಗಡೆ ತೆರಳಿದ್ದಾರೆ. ಎಲ್ಲೇ ಹೋದರೂ ಸಿಎಂ ಮಾತ್ರ ಮಾಧ್ಯಮಗಳನ್ನ ಸಮೀಪಕ್ಕೆ ಬಿಟ್ಟುಕೊಂಡಿಲ್ಲ.

 

ವೆಬ್ದುನಿಯಾವನ್ನು ಓದಿ