ಸಿಎಂ ಆದಾಗ ನನ್ನ ಬಳಿ ಒಂದು ಜೊತೆ ಮಾತ್ರ ಬಟ್ಟೆಯಿತ್ತು: ಯೋಗಿ ಆದಿತ್ಯನಾಥ್

ಬುಧವಾರ, 29 ಮಾರ್ಚ್ 2017 (17:31 IST)
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಚಾನಕ್‌ ಆಗಿ ನಾಳೆ ಸಿಎಂ ಆಗುವಂತೆ ಹೇಳಿದರು. ಆವಾಗ ನನ್ನ ಬಳಿ ಒಂದು ಜೊತೆ ಮಾತ್ರ ಬಟ್ಟೆಯಿತ್ತು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.  
 
ಉತ್ತರಪ್ರದೇಶದ ಲಕ್ನೋದಲ್ಲಿ ಆಯೋಜಿಸಲಾದ ಯೋಗ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಗ ಮಹೋತ್ವದಲ್ಲಿ ಭಾಗಿಯಾಗಿದ್ದು ನನ್ನ ಸೌಭಾಗ್ಯ ಎಂದರು. 
 
ಸಾಧು ಸಂತರಿಗೆ ಜನ ಭಿಕ್ಷೆ ನೀಡುವುದಿಲ್ಲ. ಆದರೆ, ನನ್ನ ಪಕ್ಷ ಮತ್ತು ಪ್ರಧಾನಿ ಮೋದಿ ನನಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಸ್ಥಾನವನ್ನೇ ನೀಡಿದರು ಎಂದರು.
 
ಪ್ರಧಾನಿ ಮೋದಿಯಿಂದ ಸಕಾರಾತ್ಮಕ ಯೋಚನೆ ಕಲಿತಿದ್ದೇನೆ. ಅದರಂತೆ, ಸಕಾರಾತ್ಮಕ ಯೋಚನೆಯಿಂದ ಕಾರ್ಯನಿರ್ವಹಿಸುತ್ತಿರುವೆ. ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಲು ಹಿಂಜರಿಯುವುದಿಲ್ಲ. ರಾಜ್ಯದಲ್ಲಿರುವ ಎಲ್ಲಾ ರೋಗಗಳ ಬಗ್ಗೆ ನಮಗೆ ಗೊತ್ತಿದೆ. ರೋಗಗಳಿಗೆ ಚಿಕಿತ್ಸೆ ನೀಡುವುದು ಕೂಡಾ ನಮಗೆ ಗೊತ್ತಿದೆ ಎಂದರು.  
 
ಪ್ರಧಾನಿ ಮೋದಿ ಯೋಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದರು. ಜೂನ್ 21 ರಂದು ಯೋಗ ದಿನ ಭಾರತೀಯರಿಗೆ ಹೆಮ್ಮೆಯ ದಿನವಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಸ ವ್ಯಕ್ತಪಡಿಸಿದರು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ