ಅಪ್ಪನಿಗೆ ಮಣ್ಣುಮುಕ್ಕಿಸಿ ಸೈಕಲ್ ಚಿಹ್ನೆಯನ್ನು ತನ್ನಾದಾಗಿಸಿಕೊಂಡು ಬೀಗುತ್ತಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸಮಾನ ಮನಸ್ಕರ ಜತೆಯಲ್ಲಿ ಸೇರಿಕೊಂಡು ಮಹಾಮೈತ್ರಿ ರೂಪಿಸಲಾಗುವುದು ಎಂದು ಹೇಳಿದ್ದಾರೆ. ಅವರ ಜತೆಗೆ ಕೈ ಜೋಡಿಸುತ್ತಿರುವುದಾಗಿ ಕಾಂಗ್ರೆಸ್ ಈಗಾಗಲೇ ಘೋಷಿಸಿದ್ದು ಇಂದು ಅಖಿಲೇಶ್ ಈ ಕುರಿತು ಘೋಷಣೆ ಮಾಡುವ ಸಾಧ್ಯತೆಗಳಿವೆ.