ಎಲ್ಲರೂ ವಿಕಾಸದತ್ತ ಮುಂದಕ್ಕೆ ಚಲಿಸುವುದನ್ನು ಖಚಿತಪಡಿಸಿಕೊಳ್ಳಲು ಸಕಾರಾತ್ಮಕ ಕ್ರಿಯೆಗಳ ಅಗತ್ಯವಿದೆ ಎಂಬ ಉಪ ರಾಷ್ಟ್ರಪತಿ ಎಂ ಹಮೀದ್ ಅನ್ಸಾರಿ ಅವರ ದೃಷ್ಟಿಕೋನವನ್ನು ಸಮರ್ಥಿಸಿಕೊಂಡು ಮಾತನಾಡಿದ , ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ, 'ಅವರು ಹೇಳಿದ್ದು ಸಮರ್ಪಕವಾಗಿದೆ. ನಾವು ಅವರ ಮಾತನ್ನು ಸಂಪೂರ್ಣವಾಗಿ ಒಪ್ಪುತ್ತೇವೆ. ಸರ್ಕಾರ 'ಸಬ್ಕಾ ಸಾಥ್ , ಸಬ್ಕಾ ವಿಕಾಸ್', ಭರವಸೆ ನೀಡಿತ್ತು. ಆದರೆ ಇಂದು ತಾರತಮ್ಯ ತಾಂಡವಾಡುತ್ತಿದೆಟ, ಎಂದು ಖೇದ ವ್ಯಕ್ತ ಪಡಿಸಿದ್ದಾರೆ.
'ಕೇಂದ್ರ ಸರ್ಕಾರ, ಅದರ ಭಾಗವಾಗಿರುವ ಸಚಿವರು, ಸಂಸದರೇ ತಾರತಮ್ಯವನ್ನು ಅನುಸರಿಸುತ್ತಿದ್ದಾರೆ. ಅದೀಗ ಸಾಮಾನ್ಯವಾಗಿ ಬಿಟ್ಟಿದೆ', ಎಂದು ತಿವಾರಿ ಆರೋಪಿಸಿದ್ದಾರೆ.