ಸಬ್ಕಾ ಸಾಥ್, ಸಬ್ಕಾ ವಿಕಾಸ್ ವಾಗ್ದಾನವೇನಾಯಿತು?: ಕೇಂದ್ರಕ್ಕೆ ಕಾಂಗ್ರೆಸ್ ಸವಾಲು

ಮಂಗಳವಾರ, 1 ಸೆಪ್ಟಂಬರ್ 2015 (17:44 IST)
ಎಲ್ಲರನ್ನು ಜತೆ ಸೇರಿಸಿಕೊಂಡು ಅಭಿವೃದ್ಧಿ  ಕಡೆ ಸಾಗುತ್ತೇವೆ ಎಂಬ ಧ್ಯೇಯವನ್ನಿಟ್ಟುಕೊಂಡು ಸಬ್ಕಾ ಸಾಥ್, ಸಬ್ಕಾ ವಿಕಾಸ್ ಎಂಬುದಾಗಿ ನೀವು ಮಾಡಿದ್ದ ವಾಗ್ದಾನವೇನಾಯಿತು ಎಂದು ಕಾಂಗ್ರೆಸ್ ಕೇಂದ್ರಕ್ಕೆ ಪ್ರಶ್ನಿಸಿದೆ. 

ಎಲ್ಲರೂ ವಿಕಾಸದತ್ತ ಮುಂದಕ್ಕೆ ಚಲಿಸುವುದನ್ನು ಖಚಿತಪಡಿಸಿಕೊಳ್ಳಲು ಸಕಾರಾತ್ಮಕ ಕ್ರಿಯೆಗಳ ಅಗತ್ಯವಿದೆ ಎಂಬ ಉಪ ರಾಷ್ಟ್ರಪತಿ ಎಂ ಹಮೀದ್ ಅನ್ಸಾರಿ ಅವರ ದೃಷ್ಟಿಕೋನವನ್ನು ಸಮರ್ಥಿಸಿಕೊಂಡು ಮಾತನಾಡಿದ , ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ, 'ಅವರು ಹೇಳಿದ್ದು ಸಮರ್ಪಕವಾಗಿದೆ. ನಾವು ಅವರ ಮಾತನ್ನು ಸಂಪೂರ್ಣವಾಗಿ ಒಪ್ಪುತ್ತೇವೆ. ಸರ್ಕಾರ 'ಸಬ್ಕಾ ಸಾಥ್ , ಸಬ್ಕಾ ವಿಕಾಸ್', ಭರವಸೆ ನೀಡಿತ್ತು. ಆದರೆ ಇಂದು ತಾರತಮ್ಯ ತಾಂಡವಾಡುತ್ತಿದೆಟ, ಎಂದು ಖೇದ ವ್ಯಕ್ತ ಪಡಿಸಿದ್ದಾರೆ.
 
'ಕೇಂದ್ರ ಸರ್ಕಾರ, ಅದರ ಭಾಗವಾಗಿರುವ ಸಚಿವರು, ಸಂಸದರೇ ತಾರತಮ್ಯವನ್ನು ಅನುಸರಿಸುತ್ತಿದ್ದಾರೆ. ಅದೀಗ ಸಾಮಾನ್ಯವಾಗಿ ಬಿಟ್ಟಿದೆ', ಎಂದು ತಿವಾರಿ ಆರೋಪಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ