ದೇಪಾಲಪುರದಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಸೋನಿಯಾ ಗಾಂಧಿ, ಮಗ ರಾಹುಲ್ ಗಾಂಧಿ ಮತ್ತು ಅಳಿಯ ರಾಬರ್ಟ್ ವಾಧ್ರಾರವರನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತಾ "ಕಾಂಗ್ರೆಸ್ ತಾಯಿ, ಮಗ ಮತ್ತು ಭಾವನ ಸ್ವಂತ ಸಂಸ್ಥೆಯಾಗಿ ಬಿಟ್ಟಿದೆ. ಕಾಂಗ್ರೆಸ್ನ ಮೂಲತತ್ವಗಳು ಮಾಯವಾಗಿ ಹೋಗಿವೆ. ಸ್ವಾತಂತ್ರ್ಯದ ನಂತರ, ಈ ದೇಶದ ಬಡವರು ಕಾಂಗ್ರೆಸ್ ಪಕ್ಷದ ವಂಚನೆಗೆ ಸಿಲುಕಿದ್ದಾರೆ ಎಂದು ಹೇಳಿದರು.
ತನ್ನ ಪ್ರಮುಖ ಎದುರಾಳಿ, ಕಾಂಗ್ರೆಸ್ ಅಭ್ಯರ್ಥಿ ಸತ್ಯನಾರಾಯಣ ಪಟೇಲ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೇರಿದರೆ ಹಣದುಬ್ಬರಕ್ಕೆ ನಿಯಂತ್ರಣ ಹಾಕಲಿದೆ ಮತ್ತು ಭೃಷ್ಟಾಚಾರಕ್ಕೆ ಅಂತ್ಯ ಕಾಣಿಸಲಿದೆ ಎಂದರು.